Home ಟಾಪ್ ಸುದ್ದಿಗಳು ಶಿವಮೊಗ್ಗ: ಪೊಲೀಸರ ಗಾಂಜಾ ಬೇಟೆ; ಆರೋಪಿಗಳು ಅಂಧರ್

ಶಿವಮೊಗ್ಗ: ಪೊಲೀಸರ ಗಾಂಜಾ ಬೇಟೆ; ಆರೋಪಿಗಳು ಅಂಧರ್

ತೀರ್ಥಹಳ್ಳಿ: ನಗರದಲ್ಲಿ ಮತ್ತೆ ಪೊಲೀಸರು ಗಾಂಜಾ ಗಿರಾಕಿಗಳ ಪತ್ತೆಗೆ ಬಲೆಬೀಸಿದ್ದು, ಗಾಂಜಾ ಸೇವಿಸುವವರನ್ನೇ ಟಾರ್ಗೆಟ್ ಮಾಡಿ ವಶಕ್ಕೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ.


ಇದೀಗ ಚಿಟ್ಟೆ ಯಾನೆ ನಿತಿನ್ ಕುಮಾರ್, ಸಕ್ಲೇನ್, ಆರ್ ಎಂ ಎಲ್ ನಗರದ ಸಮೀರ್, ತೀರ್ಥಹಳ್ಳಿಯ ಸಂಜಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.


ಈ ಬಗ್ಗೆ ತಮಗೆ ಲಭಿಸಿರುವ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕಳೆದ ಮೂರು ದಿನಗಳ ಒಳಗೆ ಅನುಪಿನಕಟ್ಟೆ ರಸ್ತೆ ಬಳಿ ಇರುವ ತುಂಗಾ ಮೇಲ್ದಂಡೆ ಚನಲ್ ಬಳಿಯ ಸೇತುವೆ ಹತ್ತಿರ ಗಾಂಜಾ ಮಾರುತ್ತಿದ್ದ ಈ ನಾಲ್ವರನ್ನು ಬಂಧಿಸಿ, 30 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದರು.


ಇದೀಗ ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಗಾಂಜಾ ಮಾಫಿಯಾದ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದಾರೆ.

Join Whatsapp
Exit mobile version