Home ಟಾಪ್ ಸುದ್ದಿಗಳು ದೆಹಲಿ ಭೇಟಿ ಬಳಿಕ ಶೆಟ್ಟರ್- ಯಡಿಯೂರಪ್ಪ ರಹಸ್ಯ ಮಾತುಕತೆ: ಬಿಜೆಪಿ ಪಾಳಯದಲ್ಲಿ ಕೆರಳಿದ ಕುತೂಹಲ

ದೆಹಲಿ ಭೇಟಿ ಬಳಿಕ ಶೆಟ್ಟರ್- ಯಡಿಯೂರಪ್ಪ ರಹಸ್ಯ ಮಾತುಕತೆ: ಬಿಜೆಪಿ ಪಾಳಯದಲ್ಲಿ ಕೆರಳಿದ ಕುತೂಹಲ

ಬೆಂಗಳೂರು: ದೆಹಲಿ ಹೈಕಮಾಂಡ್ ಭೇಟಿ ಬಳಿಕ ರಾಜ್ಯಕ್ಕೆ ಮರಳಿದ್ದ ಜಗದೀಶ್ ಶೆಟ್ಟರ್ ವಿಮಾನ ನಿಲ್ದಾಣದಿಂದ ನೇರವಾಗಿ ಯಡಿಯೂರಪ್ಪ ನಿವಾಸದತ್ತ ಧಾವಿಸಿದ್ದು, ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ.

‌ಯಡ್ಡಿ ಬೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಲು ನಿರಾಕರಿಸಿದ ಶೆಟ್ಟರ್ , ಭೇಟಿ ಬಗ್ಗೆ ಯಾವುದೇ ಸುಳಿವು ನೀಡದೆ ಹೊರಟು ಹೋಗಿದ್ದಾರೆ. ಆ ಬಳಿಕ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್ ರಾಜ್ಯ ರಾಜಕಾರಣದಲ್ಲಿ ಏನೋ ಬೆಳವಣಿಗೆ ಆಗುತ್ತಾ ಇದೆ, ನನಗೂ ಆ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಶೆಟ್ಟರ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಸಾಧ್ಯತೆಯೇ ಇಲ್ಲ, ಆದರೆ ಅಧ್ಯಕ್ಷರ ಅವದಿ ಮುಗಿದು ಸಹಜವಾಗಿ ಮತ್ತೊಬ್ಬರ ಆಯ್ಕೆ ನಡೆಯಲೇಬೇಕು ಎಂದು ಹೇಳಿದ್ದಾರೆ.

ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಅದು ಹೈಕಮಾಂಡ್ ಗೆ ಬಿಟ್ಟದ್ದು, ಈಗಲೇ ಏನೂ ಹೇಳೋಕೆ ಬಯಸಲ್ಲ ಎಂದು ತಿಳಿಸಿದರು.

ಅಮಿತ್ ಶಾ ಭೇಟಿ ಬಳಿಕ ಬೊಮ್ಮಾಯಿ ಬದಲಾವಣೆ ಬಗ್ಗೆ ರಾಜ್ಯದಲ್ಲಿ ಊಹಾಪೋಹಗಳು ಉಂಟಾಗಿದ್ದು, ಇದು ಕಾಂಗ್ರೆಸ್ ನ ಕಪೋಕಲ್ಪಿತ ಕತೆಯಷ್ಟೇ ಎಂದು ಬಿಜೆಪಿ ನಾಯಕರೆಲ್ಲರೂ ಟೀಕಿಸಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿಗರು ಹೇಳುತ್ತಿದ್ದರೂ ಶೆಟ್ಟರ್ ಯಡಿಯೂರಪ್ಪ ಮಾತುಕತೆ ಕುತೂಹಲ ಮೂಡಿಸಿದೆ

Join Whatsapp
Exit mobile version