Home ಟಾಪ್ ಸುದ್ದಿಗಳು ಎನ್’ಸಿಪಿ ಅಜಿತ್ ಪವಾರ್ ಬಣಕ್ಕೆ ಹಿನ್ನಡೆ: ಪಕ್ಷ ತೊರೆದ ಮೂವರು ನಾಯಕರು

ಎನ್’ಸಿಪಿ ಅಜಿತ್ ಪವಾರ್ ಬಣಕ್ಕೆ ಹಿನ್ನಡೆ: ಪಕ್ಷ ತೊರೆದ ಮೂವರು ನಾಯಕರು

ಪುಣೆ: ಅಜಿತ್ ಪವಾರ್ ಬಣದ ಎನ್ ಸಿಪಿಗೆ ಮತ್ತೊಂದು ಆಘಾತ ಉಂಟಾಗಿದೆ. ಪಿಂಪ್ರಿ–ಛಿಂಚ್ವಾಡ ಘಟಕದ ಅಧ್ಯಕ್ಷ ಅಜಿತ್ ಗೌಹಾನೆಯವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಇಬ್ಬರು ಮಾಜಿ ಕಾರ್ಪೊರೇಟರ್ ಗಳು ಕೂಡ ಪಕ್ಷ ತೊರೆದಿದ್ದಾರೆ.


ಪಕ್ಷದ ಅಧ್ಯಕ್ಷ ಸುನಿಲ್ ತತ್ಕಾರೆ ಅವರಿಗೆ ಗೌಹಾನೆ ಹಾಗೂ ಇತರರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ‘ನಾವು ಶರದ್ ಪವಾರ್ ಅವರ ಆಶೀರ್ವಾದ ಬೇಡುತ್ತೇವೆ’ ಎಂದು ಗೌಹಾನೆ ಬುಧವಾರ ಹೇಳಿದ್ದಾರೆ.
ಇವರೆಲ್ಲರೂ ಎನ್’ಸಿಪಿಯ ಶರದ್ ಪವಾರ್ ಬಣಕ್ಕೆ ಸೇರ್ಪಡೆಯಾಗಿದ್ದಾರೆ.

Join Whatsapp
Exit mobile version