Home ಟಾಪ್ ಸುದ್ದಿಗಳು ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಜೀವವನ್ನೇ ಕಳೆದುಕೊಂಡ..!

ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಜೀವವನ್ನೇ ಕಳೆದುಕೊಂಡ..!

ಚತ್ತೀಸಗಢ: ರಾಯಗಢ ಜಿಲ್ಲೆಯ ಗುಧಯ್ರಿ ಗ್ರಾಮದ ಸಾರಂಗಗಢ ಅರಣ್ಯ ಪ್ರದೇಶದಲ್ಲಿ ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ 21 ವರ್ಷದ ಯುವಕನನ್ನು ಕಾಡಾನೆ ಕೊಂದು ಹಾಕಿದ ಘಟನೆ ನಡೆದಿದೆ .
ಮೃತ ಯುವಕ ಮನೋಹರ್​ ಪಟೇಲ್​ ಮೂವರು ಗೆಳೆಯರ ಜೊತೆ ಸೇರಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಆನೆಯ ತುಂಬಾ ಸಮೀಪಕ್ಕೆ ಹೋಗಿದ್ದರು ಎಂದು ರಾಯ್​ಗಢ ಅರಣ್ಯ ಇಲಾಖೆ ವಿಭಾಗದ ಡಿಎಫ್​ಓ ಪ್ರಣಯ್​ ಮಿಶ್ರಾ ಹೇಳಿದ್ದಾರೆ.

ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಂತೆಯೇ ಆಕ್ರೋಶಗೊಂಡ ಆನೆ ಕೂಡಲೇ ಈ ನಾಲ್ವರ ಮೇಲೆ ದಾಳಿ ಮಾಡಿದೆ. ಮೂವರು ಆನೆಯ ಆಕ್ರಮಣದಿಂದ ತಪ್ಪಿಸಿಕೊಂಡಿದ್ದು, ಪಟೇಲ್​ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ಯುವಕನ ಕುಟುಂಬಕ್ಕೆ 25 ಸಾವಿರ ರೂಪಾಯಿ ಶೀಘ್ರ ಪರಿಹಾರ ನೀಡಲಾಗಿದೆ.

ಈ ಆನೆ ಪಟೇಲ್​ಗೂ ಮೊದಲು ಮಲ್ದಾ ಗ್ರಾಮದಲ್ಲಿ ವೃದ್ಧ ಮಹಿಳೆಯನ್ನು ಶುಕ್ರವಾರ ಕೊಲೆ ಮಾಡಿತ್ತು. ಕೆಲ ದಿನಗಳ ಹಿಂದಷ್ಟೇ ಈ ಆನೆ ಸಾರಂಗಗಢ ಪ್ರದೇಶಕ್ಕೆ ಬಂದಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Join Whatsapp
Exit mobile version