Home ಜಾಲತಾಣದಿಂದ ಮಾರಿಕೊಂಡ ಉಳಿದ ಮಾಧ್ಯಮಗಳ ಮೌನ ಇತಿಹಾಸ ಮರೆಯದು: ಎಸ್’ಡಿಪಿಐ

ಮಾರಿಕೊಂಡ ಉಳಿದ ಮಾಧ್ಯಮಗಳ ಮೌನ ಇತಿಹಾಸ ಮರೆಯದು: ಎಸ್’ಡಿಪಿಐ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡೋದು ಒಂದೇ ವಿಚಾರದಲ್ಲಿ. ಅದು ಸತ್ಯ ನುಡಿಯುವವರನ್ನು ಹೆದರಿಸುವುದು, ಅವರ ಮೇಲೆ ದೌರ್ಜನ್ಯ ಎಸಗುವುದರಲ್ಲಿ. ಬಿಬಿಸಿ ಮೇಲಿನ ದಾಳಿ ಅದಕ್ಕೊಂದು ಸ್ಪಷ್ಟ ಉದಾಹರಣೆ. ಸರಕಾರದ ಈ ನಡೆ ಖಂಡನೀಯ. ಮಾರಿಕೊಂಡ ಉಳಿದ ಮಾಧ್ಯಮಗಳ ಮೌನ ಇತಿಹಾಸ ಮರೆಯದು ಎಂದು SDPI  ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಝ್ ಕಡಂಬು ಟೀಕಿಸಿದ್ದಾರೆ.

ಬಿಬಿಸಿ ಮೇಲಿನ ಐಟಿ ದಾಳಿಯನ್ನು ಟ್ವೀಟ್ ಮೂಲಕ ಖಂಡಿಸಿರುವ ಅವರು, ಸತ್ಯ ಹೇಳುವವರನ್ನು, ಸರ್ಕಾರದ ದುರಾಡಳಿತವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಲಾಗುತ್ತಿದೆ. ಇದು ಖಂಡನೀಯ ಎಂದು ತಿಳಿಸಿದ್ದಾರೆ.

Join Whatsapp
Exit mobile version