Home ಕರಾವಳಿ ಸುರತ್ಕಲ್ ಟೋಲ್ ಗೇಟ್ ಸಮಸ್ಯೆ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ಒಂದು ವಾರದ ಗಡು ನೀಡಿದ SDPI

ಸುರತ್ಕಲ್ ಟೋಲ್ ಗೇಟ್ ಸಮಸ್ಯೆ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ಒಂದು ವಾರದ ಗಡು ನೀಡಿದ SDPI

ಮಂಗಳೂರು:  ಸುರತ್ಕಲ್ ಟೋಲ್ ಗೇಟ್ ವಿರುದ್ಧ ಆಸಿಫ್ ಆಪತ್ಭಾಂಧವ ನೇತೃತ್ವದ ತಂಡ ನಡೆಸುತಿರುವ ಅನಿರ್ದಿಷ್ಟಾವದಿ ಪ್ರತಿಭಟನೆಗೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಭೇಟಿ ನೀಡಿದರು.

ಬಳಿಕ ಮಾತಾಡಿದ ಅವರು, ಅವೈಜ್ಞಾನಿಕವಾಗಿರುವ ಈ ಟೋಲ್ ಗೇಟ್ ವಿರುದ್ಧ ಕಳೆದ ಹನ್ನೊಂದು ದಿನಗಳಿಂದ ಆಸಿಫ್ ತಂಡ ನಡೆಸುತಿರುವ ಪ್ರತಿಭಟನೆ ಕಂಡೂ ಕಾಣದಂತೆ ಶಾಸಕರು,ಸಂಸದರು,ಜಿಲ್ಲಾಡಳಿತ  ನಟಿಸುವುದು ಅಕ್ಷಮ್ಯ,ಇದಕ್ಕೆ ಕೂಡಲೇ ಸ್ಪಂದಿಸಲು ಎಸ್ಡಿಪಿಐ ಒಂದು ವಾರದ ಗಡು ನೀಡುತಿದೆ.ಇಲ್ಲದೇ ಹೋದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಜೊತೆಗಿದ್ದರು.

Join Whatsapp
Exit mobile version