ಅವೈಜ್ಞಾನಿಕ ಮತ್ತು ಅನಾನುಭವಸ್ಥರಿಗೆ ಗುತ್ತಿಗೆ ನೀಡಿದ್ದೆ ಮರವೂರು ಸೇತುವೆ ಬಿರುಕಿಗೆ ಕಾರಣ: ಎಸ್.ಡಿ.ಪಿ.ಐ ಆರೋಪ

Prasthutha|

ಮಂಗಳೂರು : ಮಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ಮರವೂರು ಸೇತುವೆಯು ಮುರಿದಿದ್ದು ಇದು ಪಕ್ಕದಲ್ಲೆ ನಿರ್ಮಾಣಗೊಳ್ಳುತ್ತಿರುವ ಅವೈಜ್ಞಾನಿಕ ರೀತಿಯಲ್ಲಿ ನಡೆದ ಹೊಸ ಸೇತುವೆ ಕಾಮಗಾರಿಯೇ ಕಾರಣವಾಗಿದ್ದು. ಗುತ್ತಿಗೆ ಪಡೆದ ಕಂಪೆನಿಯು ಅನುಭವದಲ್ಲಿ ಭಾರಿ ಕೊರತೆ ಇದ್ದು ರಾಜಕೀಯ ಪ್ರೇರಿತವಾಗಿ ಗುತ್ತಿಗೆ ಪಡೆದು ಕೊಂಡಿದ್ದಾರೆ ಎಂದು ಎಸ್.ಡಿ.ಪಿ.ಐ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿಯ ಅದ್ಯಕ್ಷ ಆಸಿಫ್ ಕೋಟೆಬಾಗಿಲು ಆರೋಪಿಸಿದ್ದಾರೆ.

- Advertisement -


ಸಂಬಂಧಪಟ್ಟ ಇಲಾಖೆ ಈ ಸಂಧರ್ಭದಲ್ಲಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಇದರ ಹಿಂದಿರುವ ಕೈಗಳನ್ನು ಕಾನೂನಿನ ಮುಂದೆ ತಂದು ಶಿಕ್ಷೆಗೊಳಪಡಿಸಬೇಕು. ಹಾಗೂ ಸೇತುವೆಯು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಟೀಲಿನಿಂದ ಬಜ್ಪೆ ಮಾರ್ಗವಾಗಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಅತೀ ಶೀಘ್ರವಾಗಿ ಸೇತುವೆಯನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಬಿಟ್ಟುಕೊಡಬೇಕೆಂದು ಈ ಸಂಧರ್ಭ ಒತ್ತಾಯಿಸಿದರು.

Join Whatsapp