ಬಹುಜನ ಸಮಾಜದ ಮುಖಂಡ ಶಿವಪ್ಪ ಅಟ್ಟೋಳೆ ನಿಧನಕ್ಕೆ SDPI ಸಂತಾಪ

Prasthutha|

ಮಂಗಳೂರು: ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕಿನ ಮಾಜಿ ಸಂಚಾಲಕರು, ಬಹುಜನ ಸಮಾಜ ಪರಿವರ್ತನಾ ವೇದಿಕೆಯ ಹಾಲಿ ಜಿಲ್ಲಾ ಸಂಚಾಲಕರಾದ ಕಡಬ ತಾಲೂಕು ಸವಣೂರು ನಿವಾಸಿಯಾಗಿರುವ ಶಿವಪ್ಪ ಅಟ್ಟೋಳೆ ಯವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮರಣ ಹೊಂದಿದ್ದಾರೆ.

- Advertisement -

 ಶೋಷಿತ, ದಲಿತ ದಮನಿತ,ಅಲ್ಪಸಂಖ್ಯಾತ ಸಮುದಾಯಗಳ ಪರವಾದ ನಿಲುವು ಹೊಂದಿದ್ದ ಶಿವಪ್ಪ ರವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಸಂತಾಪ ವ್ಯಕ್ತಪಡಿಸಿದ್ದಾರೆ

   ಶಿವಪ್ಪ ನವರು ಉಳ್ಳಾಲ ನಗರಸಭೆಯ ಮೇಲ್ವಿಚಾರಕ ರಾಗಿದ್ದು ಅವರ ಧರ್ಮಪತ್ನಿ ಕೇಂದ್ರ ಸರ್ಕಾರದ ಕಾರ್ಮಿಕ ಭವಿಷ್ಯ ನಿಧಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಎಸ್ ಡಿ ಪಿ ಐ ಪಕ್ಷದ ಮುಖಂಡರಾಗಿದ್ದ ದಿವಂಗತ ಕೂಸಪ್ಪ ನವರ ಆತ್ಮೀಯ ಒಡನಾಡಿಯಾಗಿದ್ದ ಶ್ರೀಯುತರು ಪಕ್ಷದ ಓರ್ವ ಹಿತೈಷಿಯಾಗಿದ್ದು , ತಳ ಸಮುದಾಯಗಳ ಬಗ್ಗೆ ವಿಶೇಷ ಒಲವು ಮತ್ತು ಪ್ರಾಮಾಣಿಕ ಕಾಳಜಿ ಹೊಂದಿದ್ದರು.

- Advertisement -

  ಇವರ ನಿಧನದಿಂದ ಶೋಷಿತ ಸಮುದಾಯವು ಓರ್ವ ಪ್ರಾಮಾಣಿಕ,ಶಿಸ್ತಿನ ನಾಯಕನನ್ನು ಕಳೆದುಕೊಂಡಿದೆ.ಶಿವಪ್ಪ ಅಟ್ಟೋಳೆಯವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ  ಕುಟುಂಬ ಹಾಗೂ ಒಡನಾಡಿಗಳಿಗೆ ನೀಡಲಿ ಮತ್ತು ಅವರ ಆದರ್ಶ, ಬದ್ದತೆ ಸಮಾಜಕ್ಕೆ ಸಿಗಲಿ ಎಂದು ಅನ್ವರ್ ಸಾದತ್ ಬಜತ್ತೂರು ಸಂತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp