SDPI ಕಾರ್ಯಕರ್ತ ಮುಹಮ್ಮದ್ ಶಾಫಿ ಬೋಳಿಯಾರ್ ಮರಣ : SDPI ದ.ಕ ಜಿಲ್ಲಾ ಸಮಿತಿ ಸಂತಾಪ

Prasthutha|

ಮಂಗಳೂರು: ಮುಹಮ್ಮದ್ ಶಾಫಿ ಬೋಳಿಯಾರ್ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಳಿಯಾರಿನ ಮುಹಮ್ಮದ್ ಶಾಫಿ ಎಂಬ SDPI ಪಕ್ಷದ ಕಾರ್ಯಕರ್ತ ಇಂದು ಮಧ್ಯಾಹ್ನ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಶಾಕ್ ತಗುಲಿ ನಿಧನ ಹೊಂದಿದ ವಾರ್ತೆಯು ಅತೀವ ನೋವನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ಅತ್ಯಂತ ನಿಷ್ಠಾವಂತನಾಗಿ ಕೆಲಸ ಮಾಡುತ್ತಿದ್ದರಲ್ಲದೆ ತನು ಮನ ಧನ ಸಹಾಯವನ್ನು ಮಾಡುತ್ತಿದ್ದ ಕಾರ್ಯಕರ್ತನಾಗಿದ್ದ ಶಾಫಿಯ ಅಗಲಿಕೆಯು ಪಕ್ಷಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹ್ ನು ನಮ್ಮ ಸಹೋದರನ ಪಾರತ್ರಿಕ ಲೋಕದ ಬದುಕನ್ನು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ  ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Join Whatsapp