Home ಕರಾವಳಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು : SDPI ಆಕ್ಷೇಪಣೆ

ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು : SDPI ಆಕ್ಷೇಪಣೆ

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯು ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನು ಭೇಟಿಯಾಗಿ ಸುರತ್ಕಲ್ ವೃತ್ತಕ್ಕೆ ವಿನಾಯಕ ದಾಮೋದರ್ ಸಾವರ್ಕರ್ ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಮನವಿಯನ್ನು ಸಲ್ಲಿಸಿದೆ.

ಕಳೆದ ಬಾರಿಯ ನಿಕಟ ಪೂರ್ವ ಆಯುಕ್ತರು ಇಂತಹ ಕೆಟ್ಟ ಸಂಪ್ರದಾಯಕ್ಕೆ ಅವಕಾಶವನ್ನು ಕೊಡಲಿಲ್ಲ ಎಂದು ನೆನಪಿಸಿದ ನಿಯೋಗ, ಸ್ಥಳೀಯ ನಾಗರಿಕರ ಬೇಡಿಕೆಯ ಮೇರೆಗೆ ಈ ಕೆಳಗೆ ಸೂಚಿಸಿರುವ  ಹೆಸರಿನಲ್ಲಿ (ಕೋಟಿ ಚೆನ್ನಯ್ಯ, ಯು. ಶ್ರೀನಿವಾಸ ಮಲ್ಯ ಹಾಗೂ ಎಂ.ಲೋಕಯ್ಯ) ನಾಮಕರಣ ಮಾಡಬೇಕೆಂದು ಒತ್ತಾಯಿಸಿದೆ.

ನಿಯೋಗದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಯಾಸೀನ್ ಅರ್ಕುಳ, ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು, ಕ್ಷೇತ್ರ ಸಮಿತಿ ಸದಸ್ಯರಾದ ಉಸ್ಮಾನ್ ಗುರುಪುರ ಹಾಗೂ ನಾಸಿರ್ ಉಳಾಯಿಬೆಟ್ಟು ಉಪಸ್ಥಿತರಿದ್ದರು.

Join Whatsapp
Exit mobile version