Home ಜಾಲತಾಣದಿಂದ ಮುಸ್ಲಿಮರ ವಿರುದ್ಧ ವಿಷಕಾರುವ ಸಂಘಿಗಳ ಪಕ್ಷದ ಸರ್ಕಾರದಿಂದ ಕುವೈತ್’ನಲ್ಲಿ ಉದ್ಯೋಗಾವಕಾಶದ ಜಾಹೀರಾತು: ಟೀಕೆ

ಮುಸ್ಲಿಮರ ವಿರುದ್ಧ ವಿಷಕಾರುವ ಸಂಘಿಗಳ ಪಕ್ಷದ ಸರ್ಕಾರದಿಂದ ಕುವೈತ್’ನಲ್ಲಿ ಉದ್ಯೋಗಾವಕಾಶದ ಜಾಹೀರಾತು: ಟೀಕೆ

ಬೆಂಗಳೂರು: ಭಾರತ ಇಸ್ಲಾಮಿಕರಣವಾಗುತ್ತಿದೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಗಲಿರುಳು ವಿಷಕಾರುವ ಸಂಘಿಗಳ ಪಕ್ಷದ ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ಇಸ್ಲಾಂ ಅಧಿಕೃತ ಧರ್ಮವಾಗಿರುವ ಕುವೈತ್‌’ನಲ್ಲಿ ಉದ್ಯೋಗಾವಕಾಶವಿದೆ ಅರ್ಜಿ ಸಲ್ಲಿಸಿ ಎಂದು ಜಾಹೀರಾತು ನೀಡಿದ್ದಾರೆ ಎಂದು ಹಿರಿಯ ವಕೀಲ ಸೂರ್ಯ ಮುಕುಂದರಾಜ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಸೋಮವಾರ ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತನ್ನು ಪ್ರಸ್ತಾಪಿಸಿ, ಸದಾ ಮುಸ್ಲಿಮರು ಮತ್ತು ಇಸ್ಲಾಮ್ ಧರ್ಮದ ವಿರುದ್ಧ ದ್ವೇಷಕಾರುವ ಬಿಜೆಪಿ ಮತ್ತು ಅದರ ನಾಯಕರು ಇಸ್ಲಾಮ್ ಧರ್ಮವನ್ನು ಅಧಿಕೃತ ಧರ್ಮವೆಂದು ಘೋಷಿಸಿರುವ ಕುವೈತ್ ದೇಶದ ಪರವಾಗಿ ಜಾಹೀರಾತು ಪ್ರಕಟಿಸಿದೆ. “ಕುವೈತ್ ರಾಷ್ಟ್ರದಲ್ಲಿ ವೈದ್ಯರಿಗೆ ಉದ್ಯೋಗಾವಕಾಶ” ಎಂಬ ಜಾಹೀರಾತು ಪ್ರಕಟಿಸಿದೆ ಎಂದು ಟೀಕಿಸಿದ್ದಾರೆ.

ಸೂರ್ಯ ಮುಕುಂದರಾಜ್ ಅವರು ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ಘಟಕ ಹಾಗೂ ಮಾಧ್ಯಮ ವಕ್ತಾರರಾಗಿದ್ದಾರೆ.

Join Whatsapp
Exit mobile version