ಕೇರಳದಲ್ಲಿ ಪ್ರಬಲ ಎಡಪಂಥೀಯರಿಂದಾಗಿ ಸಂಘಪರಿವಾರದ ಅಜೆಂಡಾ ವಿಫಲ: ಪಿಣರಾಯಿ ವಿಜಯನ್

Prasthutha|

ತಿರುವನಂತಪುರಂ: ಕೇರಳದಲ್ಲಿ ಪ್ರಬಲ ಎಡಪಂಥೀಯರಿಂದಾಗಿ ಸಂಘ ಪರಿವಾರದ ಕೋಮುವಾದಿ ಅಜೆಂಡಾವು ಸಫಲವಾಗಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

- Advertisement -

ಕಮ್ಯೂನಿಸ್ಟ್ ಕ್ರಾಂತಿಕಾರಿ ಪಿ.ಕೃಷ್ಣ ಪಿಳ್ಳೈ ಅವರ ಸ್ಮರಣಾರ್ಥ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಡಪಂಥೀಯನ್ನು ದುರ್ಬಲಗೊಳಿಸಲು ಆರ್ ಎಸ್ ಎಸ್ ವಿವಿಧ ಕೋಮುವಾದಿ ಅಜೆಂಡಾಗಳನ್ನು ಪ್ರಯತ್ನಿಸಿದ್ದಾರೆ. ಆದರೆ ಅವರು ಅದರಲ್ಲಿ ವಿಫಲರಾಗಿದ್ದಾರೆ. ಈಗ ಅವರು ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸುವತ್ತ ಗಮನಹರಿಸಿದ್ದಾರೆ. ಅದರ ಭಾಗವಾಗಿ ಅವರು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುತ್ತಾ, ಕೋಮು ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Join Whatsapp