‘ಪಬ್ಲಿಕ್ ಟಿವಿ’ಗೆ ಸವಾಲೆಸೆದ ರಕ್ಷಿತ್ ಶೆಟ್ಟಿ | ‘ಕಿರಿಕ್ ಪಾರ್ಟಿ’ ನಾಯಕನಿಗೆ ಅದೆಂತಹಾ ಕಿರಿಕ್!?

Prasthutha|

ಬೆಂಗಳೂರು: ಸೆಲೆಬ್ರಿಟಿಗಳ ಬಗ್ಗೆ ಹಗುರವಾಗಿ ಸುದ್ದಿ ಮಾಡುತ್ತಾ TRP ಗಿಟ್ಟಿಸಿಕೊಳ್ಳುವ ‘ಪಬ್ಲಿಕ್ ಟಿವಿ’ ವಿರುದ್ಧ ಸ್ಯಾಂಡಲ್ ವುಟ್ ನಟ, ‘ಕಿರಿಕ್ ಪಾರ್ಟಿ’ ಖ್ಯಾತಿಯ ನಾಯಕ ರಕ್ಷಿತ್ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ಟ್ವಿಟ್ಟರ್ ಮೂಲಕ ತನ್ನ ಆಕ್ರೋಶ ಹೊರಹಾಕಿರುವ ರಕ್ಷಿತ್ ಶೆಟ್ಟಿ ಈ ಹೋರಾಟದಲ್ಲಿ ಯಾರು ಜಯಿಸುತ್ತಾರೆ ಅನ್ನೋದನ್ನ ನೋಡಿಯೇ ಬಿಡೋಣ ಅನ್ನೋ ಮೂಲಕ ಹೆಚ್ಆರ್ ರಂಗನಾಥ್ ಮಾಲಕತ್ವದ ಸುದ್ದಿ ವಾಹಿನಿ ವಿರುದ್ಧ ಸವಾಲೆಸೆದಿದ್ದಾರೆ.

- Advertisement -

“ಕಳೆದ ಎರಡು ವರುಷಗಳಲ್ಲಿ ನನ್ನ ತೇಜೋವಧೆ ಮಾಡುವಂತಹ ಸುದ್ದಿಗಳನ್ನ ಮಾಡುತ್ತಾ ಬಂದಿದ್ದೀರಿ. ಇದುವರೆಗೂ ಅದ್ಯಾವುದಕ್ಕೂ ನಾನು ಪ್ರತಿಕ್ರಿಯಿಸಿರಲಿಲ್ಲ. ಆದರೆ ಈಗ ಸುಮ್ಮನಿರಲು ಮನಸ್ಸು ಒಪ್ಪುತ್ತಿಲ್ಲ. ಇದೆಲ್ಲಕ್ಕೂ ಹತ್ತು ದಿನಗಳ ಬಳಿಕ ಉತ್ತರ ಕೊಡುತ್ತೇನೆ” ಎಂದಿದ್ದಾರೆ.

ಈ ಕುರಿತ ಟ್ವೀಟ್ ನಲ್ಲಿ ಪತ್ರವನ್ನೂ ಲಗತ್ತಿಸಿರುವ ರಕ್ಷಿತ್ ಶೆಟ್ಟಿ, ನಿಮ್ಮ ಬಳಿ TRP ಗಾಗಿ ಚಾನೆಲ್ ಇದ್ದರೆ ನನ್ನ ಬಳಿ ನನ್ನ ಶ್ರಮ, ಶ್ರದ್ಧೆ ಹಾಗೂ ಜನಬೆಂಬಲವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಈ ಟ್ವೀಟ್ ಅನ್ನು ಪಿನ್ ಮಾಡಿಕೊಂಡಿದ್ದಾರೆ. ರಕ್ಷಿತ್ ಜೊತೆ ನಿಲ್ಲುವುದಾಗಿ ಹಲವಾರು ಅಭಿಮಾನಿಗಳು ಕಾಮೆಂಟ್ ಮಾಡುವುದರ ಮೂಲಕ ಬೆಂಬಲ ಸೂಚಿಸಿದ್ದಾರೆ.

- Advertisement -

ಉಡುಪಿ ಮೂಲದ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನೆಮಾ ‘777 ಚಾರ್ಲಿ’ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Join Whatsapp