ಕುಖ್ಯಾತ ರೌಡಿ ಬಾಂಬೆ ರವಿ ಕೊರೋನಾಗೆ ಬಲಿ

Prasthutha|

ಬೆಂಗಳೂರು:  ಕುಖ್ಯಾತ ರೌಡಿ, ಸುಪಾರಿ ಕಿಲ್ಲರ್ ಬಾಂಬೆ ರವಿ ಎಂಬಾತ  ಕೊರೋನಾ ಸೋಂಕಿನಿಂದ  ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

ಕೊರೋನದಿಂದ ಬಳಲುತ್ತಿದ್ದ ಈ ನಟೋರಿಯಸ್ ರೌಡಿ, ವಿದೇಶದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. 

ಇತ್ತೀಚೆಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿಯ ಕೊಲೆ ಯತ್ನಕ್ಕೆ ಸ್ಕೆಚ್ ಹಾಕಿದ್ದ ಆರೋಪ ಈತನ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

- Advertisement -

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಬಾಂಬೆ ರವಿ ಕುಖ್ಯಾತಿಯನ್ನು ಪಡೆದುಕೊಂಡಿದ್ದ. ಸಾಕಷ್ಟು ಬೆದರಿಕೆ ಕರೆ, ಕೊಲೆ ಯತ್ನ ಸೇರಿದಂತೆ ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು.

Join Whatsapp