ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ | ಇಬ್ಬರ ‘ನಕಲಿ ಎನ್ಕೌಂಟರ್’ ಗೆ ಸಂಚು ರೂಪಿಸಿದ್ದ ಸಚಿನ್ ವಾಝ್!

Prasthutha|

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝ್ ಅವರು ಇಬ್ಬರು ವ್ಯಕ್ತಿಗಳನ್ನು ‘ನಕಲಿ ಎನ್ಕೌಂಟರ್’ ಮೂಲಕ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

- Advertisement -

  ‘ಎನ್ಕೌಂಟರ್ ಸ್ಪೆಷಲಿಸ್ಟ್’ ಆಗಿರುವ ವಾಝ್ ಅವರು ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈಯ್ಯುವ ಮೂಲಕ ಈ ಪ್ರಕರಣವನ್ನು ಬಗೆಹರಿಸಲು ಬಯಸಿದ್ದರಾದರೂ ಅದು ವಿಫಲವಾಗಿತ್ತು.

ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈಯ್ಯುವ ಮೂಲಕ, ಸ್ಫೋಟಕ ಪತ್ತೆ ಪ್ರಕರಣವನ್ನು ಬಗೆಹರಿಸಿ ಪ್ರಶಂಸೆ ಗಳಿಸುವುದಕ್ಕೆ ವಾಝ್ ಸಂಚು ರೂಪಿಸಿದ್ದರಾದರೂ ಯೋಜನೆ ವಿಫಲಗೊಂಡಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.

- Advertisement -

ಸ್ಫೋಟಕಗಳಿಂದ ತುಂಬಿದ ಎಸ್‌ಯುವಿ ಕಾರು ಫೆಬ್ರವರಿ 25 ರಂದು ಅಂಬಾನಿಯ ನಿವಾಸದ ಮುಂದೆ ನಿಲ್ಲಿಸಲಾಗಿತ್ತು. ಎಸ್‌ಯುವಿ ಕಾರಿನ ಮಾಲಕ, ಉದ್ಯಮಿ ಮನ್ಸುಖ್ ಹಿರೇನ್ ಮಾರ್ಚ್ 5 ರಂದು ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 13 ರಂದು ಎನ್‌ಐಎ ವಾಝ್ ನನ್ನು ಬಂಧಿಸಿದೆ.

Join Whatsapp