Home ಟಾಪ್ ಸುದ್ದಿಗಳು ಆರ್ ಎಸ್ ಎಸ್ ನವರೇ ಈ ಪೆದ್ದ ಈಶ್ವರಪ್ಪನ ಬಾಯಲ್ಲಿ ಹೇಳಿಸಿರುವುದು: ಸಿದ್ದರಾಮಯ್ಯ

ಆರ್ ಎಸ್ ಎಸ್ ನವರೇ ಈ ಪೆದ್ದ ಈಶ್ವರಪ್ಪನ ಬಾಯಲ್ಲಿ ಹೇಳಿಸಿರುವುದು: ಸಿದ್ದರಾಮಯ್ಯ

ಬೆಂಗಳೂರು:  ಆರ್ ಎಸ್ ಎಸ್ ನವರೇ ಈಶ್ವರಪ್ಪ ಬಾಯಲ್ಲಿ ಹೇಳಿಸಿರುವುದು. ಈ ಪೆದ್ದ ಹೇಳಿಬಿಟ್ಟಿದ್ದಾನೆ. ಆರ್ ಎಸ್ ಎಸ್ ನವರು ಯಾವತ್ತೂ ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ, ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣಕ್ಕೆ ಗೌರವ ಕೊಡುವುದಿಲ್ಲ, ಕೇಸರಿ ಬಣ್ಣಕ್ಕೆ ಕೊಡುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸೌಧ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ರಾಜೀನಾಮೆಗೆ ಈ ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ನಡೆಸುತ್ತೇವೆ. ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದರೆ ಇಲ್ಲಿ ನಮ್ಮ ಧರಣಿ ಮೊಟಕುಗೊಳಿಸಿ ಜನರ ಮುಂದೆ ಹೋಗುತ್ತೇವೆ. ಸೋಮವಾರ ದಿನ ಎಲ್ಲಾ ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಾರೆ ಎಂದರು. 

Join Whatsapp
Exit mobile version