ಪುತ್ತೂರು | ಬೈಕ್ ಅಪಘಾತದಲ್ಲಿ ಆರೆಸ್ಸೆಸ್ ಮುಖಂಡ ವೆಂಕಟರಮಣ ಹೊಳ್ಳ ಸಾವು

Prasthutha|

ಪುತ್ತೂರು : ಬೈಕ್ ಅಪಘಾತವೊಂದರಲ್ಲಿ ಆರೆಸ್ಸೆಸ್ ಮಂಗಳೂರು ವಿಭಾಗದ ಗ್ರಾಮ ವಿಕಾಸ್ ಪ್ರಮುಖ್ ವೆಂಕಟರಮಣ ಹೊಳ್ಳ ಇಂದು ಸಾವಿಗೀಡಾಗಿದ್ದಾರೆ.

- Advertisement -

ಪುತ್ತೂರು ಪೊಲೀಸ್ ವಸತಿ ನಿಲಯಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಂಟ್ವಾಳದ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುವ ವೇಳೆ ಪೋಳ್ಯ ಸಮೀಪದ ಪೊಲೀಸ್ ಬ್ಯಾರಿಕೇಡ್ ಬಳಿಕ ಅಪಘಾತ ಸಂಭವಿಸಿದೆ.

ಅಪಘಾತ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಬೈಕ್ ಗೆ ಹಾನಿಯಾಗಿದೆ. ವೆಂಕಟರಮಣ ಅವರ ಮೃತದೇಹ ಘಟನೆ ನಡೆದ ತುಸುದೂರ ಬಿದ್ದಿದ್ದು, ತಲೆ ಜಜ್ಜಿದೆ. ಹೊಳ್ಳ ಅವರ ಬೈಕ್ ಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರಬಹುದೇ? ಎಂಬ ಸಂದೇಹ ವ್ಯಕ್ತವಾಗಿದೆ.

Join Whatsapp