Home ಟಾಪ್ ಸುದ್ದಿಗಳು ಮುಸ್ಲಿಮರನ್ನು ಬೆದರಿಸುವುದು ಆರೆಸ್ಸೆಸ್ ಉದ್ದೇಶ : ಅನೀಸ್ ಅಹ್ಮದ್

ಮುಸ್ಲಿಮರನ್ನು ಬೆದರಿಸುವುದು ಆರೆಸ್ಸೆಸ್ ಉದ್ದೇಶ : ಅನೀಸ್ ಅಹ್ಮದ್

ಹೊಸದಿಲ್ಲಿ : ಆರ್‌ಎಸ್‌ಎಸ್ ಉದ್ದೇಶ ರಾಮ ಮಂದಿರ ನಿರ್ಮಾಣವಲ್ಲ ಬದಲಾಗಿ ಮುಸ್ಲಿಮರನ್ನು ಬೆದರಿಸುವುದಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

 ಕೆಲವು ಸ್ವಯಂ ಘೋಷಿತ ಬುದ್ಧಿಜೀವಿಗಳು ಬಾಬರಿ ಮಸೀದಿಯನ್ನು ಆರ್‌ಎಸ್‌ಎಸ್‌ಗೆ ಬಿಟ್ಟುಕೊಡುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿದ್ದಾರೆ. ಈಗ ಆರ್‌ಎಸ್‌ಎಸ್ ರಾಮ ಮಂದಿರಕ್ಕೆ ಹಣ ಸಂಗ್ರಹಿಸುವ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದೆ. ಆರ್‌ಎಸ್‌ಎಸ್‌ನ ಉದ್ದೇಶ ರಾಮ ಮಂದಿರ ನಿರ್ಮಾಣವಲ್ಲ. ಬದಲಾಗಿ ಮುಸ್ಲಿಂ ಸಮುದಾಯವನ್ನು ಬೆದರಿಸುವುದಾಗಿದೆ ಎಂದು ಅನೀಸ್ ಅಹ್ಮದ್ ಟ್ವೀಟ್ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹದ ಹೆಸರಿನಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಗಲಭೆಗಳ ಕುರಿತು ಪಾಪ್ಯುಲರ್ ಫ್ರಂಟ್ ನಾಯಕ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Join Whatsapp
Exit mobile version