Home ಟಾಪ್ ಸುದ್ದಿಗಳು ಪೊಲೀಸರಿಂದ ಚಿನ್ನದ ವ್ಯಾಪಾರಿಯ ದರೋಡೆ: ಇನ್ಸ್’ಪೆಕ್ಟರ್ ಸೇರಿ ನಾಲ್ವರು ಪೊಲೀಸರು ಅಮಾನತು

ಪೊಲೀಸರಿಂದ ಚಿನ್ನದ ವ್ಯಾಪಾರಿಯ ದರೋಡೆ: ಇನ್ಸ್’ಪೆಕ್ಟರ್ ಸೇರಿ ನಾಲ್ವರು ಪೊಲೀಸರು ಅಮಾನತು

ಚಿಕ್ಕಮಗಳೂರು: ರಕ್ಷಣೆ ನೀಡಬೇಕಾದ ಪೊಲೀಸರೇ ಚಿನ್ನದ ವ್ಯಾಪಾರಿಗೆ ಬೆದರಿಕೆ ಹಾಕಿ ಐದು ಲಕ್ಷ ರೂಪಾಯಿಯನ್ನು ದೋಚಿದ ವಿಲಕ್ಷಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿದ್ದು, ಇನ್ಸ್’ಪೆಕ್ಟರ್ ಸೇರಿದಂತೆ ಮೂವರು ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಾಗಿದೆ.

ವ್ಯಾಪಾರಿಯಿಂದ ಹಣ ದೋಚಿದವರನ್ನು ಅಜ್ಜಂಪುರ ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್ ಲಿಂಗರಾಜ್, ಪೇದೆಗಳಾದ ಧನ್’ಪಾಲ್ ನಾಯ್ಕ್, ಓಂಕಾರ್’ಮೂರ್ತಿ,ಶರತ್ ರಾಜ್ ಎಂದು ಗುರುತಿಸಲಾಗಿದ್ದು, ಇವರ ಮೇಲೆ ದರೋಡೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಭಗವಾನ್ ಸಾಂಕ್ಲಾ ಎಂಬವರನ್ನು ಬೆದರಿಸಿದ ಈ ಪೊಲೀಸ್ ತಂಡ, ಬುಕ್ಕಾಂಬುದಿ ಟೋಲ್’ಗೇಟ್ ಸಮೀಪದಿಂದ ಅವರ ಬಳಿಯಿದ್ದ ಹಣವನ್ನು ದೋಚಿದೆ ಎಂದು ದೂರಲಾಗಿದೆ. ಘಟನೆಯ ಹಿನ್ನಲೆಯಲ್ಲಿ ಈ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯಲ್ಲೇ ಈ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇನ್ಸ್’ಪೆಕ್ಟರ್ ಸೇರಿದಂತೆ ಮೂವರು ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಆದೇಶ ನೀಡಿದ್ದಾರೆ.

Join Whatsapp
Exit mobile version