Home ಟಾಪ್ ಸುದ್ದಿಗಳು SDPI ನಾಯಕ ರಿಯಾಝ್ ಕಡಂಬು ವಿರುದ್ಧ ಬಿಜೆಪಿ ದೂರು

SDPI ನಾಯಕ ರಿಯಾಝ್ ಕಡಂಬು ವಿರುದ್ಧ ಬಿಜೆಪಿ ದೂರು

ಮಂಗಳೂರು: ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿರುದ್ಧ ಹೇಳಿಕೆ ನೀಡಿರುವ ಆರೋಪದ ಮೇಲೆ ಎಸ್ ಡಿಪಿಐ ನಾಯಕ ರಿಯಾಝ್ ಕಡಂಬು ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿದೆ.

ನಾವು ಕಾನೂನು, ಸಂವಿಧಾನವನ್ನು ಗೌರವಿಸುತ್ತಿರುವುದಕ್ಕೆ ಭರತ್ ಶೆಟ್ಟಿ ಉಸಿರಾಡುತ್ತಿದ್ದಾರೆ ಎಂದು ಮಂಗಳೂರು ಉತ್ತರ ಶಾಸಕರ ವಿರುದ್ಧ ತನ್ನ ಭಾಷಣದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ.

Join Whatsapp
Exit mobile version