ಕ್ಯೂ ನಲ್ಲಿರುವಾಗಲೇ ರಿಕ್ಷಾ ಚಾಲಕ ಹೃದಯಾಘಾತದಿಂದ ಮೃತ್ಯು

Prasthutha|

ಮಂಗಳೂರು: ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ಹೃದಯಾಘಾತದಿಂದ ಇಕ್ಬಾಲ್ (47) ಎಂಬವರು ಮೃತಪಟ್ಟಿದ್ದಾರೆ

- Advertisement -

ಮಂಗಳವಾರ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ಇಕ್ಬಾಲ್ ರವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಸಹುದ್ಯೋಗಿ ರಿಕ್ಷಾ ಚಾಲಕರು ಜ್ಯೋತಿ ಕೆಎಂಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.


ಮೃತರು ಬಜಾಲ್ ವಿದ್ಯಾ ನಗರ ದ ನಿವಾಸಿಯಾಗಿದ್ದು ಪ್ರಸ್ತುತ ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಅವರು ಪತ್ನಿ ಮತ್ತು ಮೂರು ಮಕ್ಕಳು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

- Advertisement -

ಸಂತಾಪ : ನಗರದ ಸೆಂಟ್ರಲ್ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿದ್ದು ವೃತ್ತಿಯಲ್ಲಿ ರೂವಾಗಲೇ ಹ್ರದಯಘಾತದಿಂದ ಮೃತ ಹೊಂದಿದ ಇಕ್ಬಾಲ್ ಕಣ್ಣೂರು ರವರ ಪರಲೋಕ ಜೀವನ ಸ್ರಷ್ಟಿಕರ್ತನು ಸುಖಗೊಳಿಸಿ ಅನುಗ್ರಹಿಸಲಿ ಅವರ ಅಗಲಿಕೆಗೆಯಿಂದ ಕುಟುಂಬಕ್ಕೂ ಬಂದು ಬಳಗಕ್ಕೂ ನೋವನ್ನು ಸಹಿಸುವ ಶಕ್ತಿಯನ್ನು ಸ್ರಷ್ಟಿಕರ್ತನು ನೀಡಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ ಸಂತಾಪ ವ್ಯಕ್ತಪಡಿಸಿದ್ದಾರೆ



Join Whatsapp
Exit mobile version