Home ಟಾಪ್ ಸುದ್ದಿಗಳು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ನ್ಯಾಯಾಧೀಶ

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ನ್ಯಾಯಾಧೀಶ

ಬಾಗಲಕೋಟೆ: ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ.16ರಲ್ಲಿ ನಡೆದಿದೆ.

ಚಿತ್ತಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಮಾನಪ್ಪ ತಳವಾರ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೂಲತಃ ಬಾಗಲಕೋಟೆ ತಾಲ್ಲೂಕಿನ ಹಿರೆಶೆಲ್ಲಿಕೇರಿ ಗ್ರಾಮದವರಾದ ಮಾನಪ್ಪ ತಳವಾರ ಕಳೆದ ಮೂರು ವರ್ಷದಿಂದ ಕಡ್ಡಾಯ ನಿವೃತ್ತಿ ಮೇಲಿದ್ದರು. ಅವರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿ ಬೆಂಗಳೂರಲ್ಲಿ ನ್ಯಾಯಾಧೀಶರಾಗಿದ್ದಾರೆ. ಎರಡನೇ ಪತ್ನಿ ಜೊತೆ ನವನಗರದಲ್ಲಿ ಮಾನಪ್ಪ ತಳವಾರ ನೆಲೆಸಿದ್ದರು.

ಮಾನಪ್ಪ ಎರಡನೇ ಮದುವೆ ಆದ  ಕಾರಣಕ್ಕಾಗಿ ಶಿಕ್ಷೆಯ ರೂಪದಲ್ಲಿ ಕಡ್ಡಾಯ ನಿವೃತ್ತಿಯನ್ನು  ಪಡೆದಿದ್ದರು.

Join Whatsapp
Exit mobile version