Home ಕರಾವಳಿ ಜಿಲ್ಲಾಧಿಕಾರಿಯಿಂದ ಮನವಿ| ಉಳ್ಳಾಲ ಉರೂಸ್ ಮುಂದೂಡಿಕೆ

ಜಿಲ್ಲಾಧಿಕಾರಿಯಿಂದ ಮನವಿ| ಉಳ್ಳಾಲ ಉರೂಸ್ ಮುಂದೂಡಿಕೆ

ಉಳ್ಳಾಲ: ಇತಿಹಾಸ ಪ್ರಸಿದ್ಧ ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಲು ಆಡಳಿತ ಸಮಿತಿ ತೀರ್ಮಾನಿಸಿದೆ.

ಡಿಸೆಂಬರ್ 23ರಿಂದ ಪ್ರಾರಂಭಗೊಳ್ಳಬೇಕಿದ್ದ ಉಳ್ಳಾಲ ಉರೂಸನ್ನು ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.


ದರ್ಗಾದ ಆಡಳಿತ ಸಮಿತಿಯು ಉರೂಸ್ ಕಾರ್ಯಕ್ರಮಕ್ಕೆ ಪ್ರಚಾರ ಕಾರ್ಯವನ್ನೂ ಕೈಗೊಂಡು ಅತಿಥಿಗಳನ್ನೂ ಆಹ್ವಾನಿಸಿತ್ತು. ಈ ನಡುವೆ ರಾಜ್ಯದಲ್ಲಿ ಓಮಿಕ್ರಾನ್ ಭೀತಿಯಿಂದಾಗಿ ಆಡಳಿತ ಸಮಿತಿಯ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿ ಉರೂಸನ್ನು ಮುಂದೂಡಲು ಮನವಿ ಮಾಡಿದ್ದರು. ಅದರಂತೆ ಇದೀಗ ಆಡಳಿತ ಸಮಿತಿಯೂ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಿ ತೀರ್ಮಾನ ಕೈಗೊಂಡಿದೆ.

Join Whatsapp
Exit mobile version