Home ರಾಜ್ಯ ಪ್ರವಾಹಪೀಡಿತ ರಾಮನಗರದಲ್ಲಿ ಪಾಪ್ಯುಲರ್ ಫ್ರಂಟ್ ನಿಂದ ಪರಿಹಾರ ಕಾರ್ಯಾಚರಣೆ

ಪ್ರವಾಹಪೀಡಿತ ರಾಮನಗರದಲ್ಲಿ ಪಾಪ್ಯುಲರ್ ಫ್ರಂಟ್ ನಿಂದ ಪರಿಹಾರ ಕಾರ್ಯಾಚರಣೆ

ರಾಮನಗರ: ಕುಂಭದ್ರೋಣ ಮಹಾಮಳೆಗೆ ರಾಮನಗರವು ತತ್ತರಿಸಿ ಹೋದಾಗ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪಾಪ್ಯುಲರ್ ಫ್ರಂಟ್ ರಕ್ಷಣಾ ಮತ್ತು ಪರಿಹಾರ ತಂಡವು ಸಮರೋಪಾದಿಯಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಯನ್ನು ನಡೆಸಿದೆ.

ಕಂಡುಕೇಳರಿಯದ ರೀತಿಯಲ್ಲಿ ಸುರಿದ ಧಾರಾಕಾರ ಮಳೆಗೆ ರಾಮನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡವು. ಜನಜೀವನ ಅಸ್ತವ್ಯಸ್ತಗೊಂಡಿತು. ಮನೆಯೊಳಗೆ ನೀರು ತುಂಬಿಕೊಂಡು ಜನರು ತತ್ತರಿಸಿ ಹೋದರು. ಸಂತ್ರಸ್ತ ಜನತೆ ಅಸಹಾಯಕರಾಗಿ ನೆರವಿನ ನಿರೀಕ್ಷೆಯಲ್ಲಿದ್ದಾಗ, ಪಾಪ್ಯುಲರ್ ಫ್ರಂಟ್ ರಕ್ಷಣಾ‌ ಮತ್ತು ಪರಿಹಾರ ತಂಡವು ಕೂಡಲೇ ಕಾರ್ಯೋನ್ಮುಖವಾಯಿತು. ನೂರಾರು ಕಾರ್ಯಕರ್ತರು ನೆರೆ ಸಂತ್ರಸ್ತ‌ ಜನತೆಯ ನೆರವಿಗೆ ಧಾವಿಸಿದರು. ಝಿಯಾವುಲ್ಲಾ ನಗರ, ಮೆಹಬೂಬ್ ನಗರ, ಗೌಸಿಯಾ ನಗರ, ಟಿಪ್ಪು ನಗರ ಮೊದಲಾದ ಪ್ರವಾಹಪೀಡಿತ ಪ್ರದೇಶಗಳಲ್ಲಿ  ಸಂತ್ರಸ್ತ ಜನತೆಗೆ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಜಾತಿಭೇದವಿಲ್ಲದೇ ನೆರವಾದರು.

ಈ ನೆರೆ ಪರಿಹಾರ ಕಾರ್ಯಾಚರಣೆ ಅಂಗವಾಗಿ ಸಂತ್ರತ್ರ ಜನತೆಗೆ ರೇಶನ್ ಕಿಟ್, ಹೊದಿಕೆ, ದೈನಂದಿನ ಆಹಾರದ ಕಿಟ್, ನೀರಿನ ಬಾಟಲ್ ಗಳು, ವಸ್ತ್ರಗಳನ್ನು ವಿತರಿಸಲಾಯಿತು. ಅದೇ ರೀತಿ ಮನೆ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

Join Whatsapp
Exit mobile version