ರಾಜಸ್ಥಾನ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ಪಡೆ ವಿರಾಟ್ ಕೊಹ್ಲಿ (70) ಮತ್ತು ಕನ್ನಡಿಗ ಪಡಿಕ್ಕಲ್ (50) ಅವರ ಅರ್ಧಶತಕ ಸಹಾಯದಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಗಳನ್ನು ಕಲೆಹಾಕಿತ್ತು.
ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 11 ರನ್ಗಳಿಂದ ಸೋಲನ್ನು ಕಂಡಿತು. ತಂಡದ ಪರ ಜೈಸ್ವಾಲ್ (49), ಧ್ರುವ್ ಜುರೆಲ್ (47) ಉತ್ತಮ ಪ್ರದರ್ಶನ ನೀಡಿದರು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧಯವಾಗಲಿಲ್ಲ.
ಆರ್ಸಿಬಿ ಪರ ಹೆಜೆಲ್ವುಡ್ 4 ವಿಕೆಟ್ ಪಡೆದರೆ, ಕೃನಾಲ ಪಾಂಡ್ಯ 2, ಭುವನೇಶ್ವರ್ ಮತ್ತು ಯಶ್ ದಯಾಲ್ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಇದರೊಂದಿಗೆ ಆರ್ಸಿಬಿ ತವರಿನಲ್ಲಿನ ಸೋಲಿನ ಓಟಕ್ಕೆ ಬ್ರೇಕ್ ಹಾಕಿತು. ಈ ಹಿಂದೆ ತವರಿನಲ್ಲಿ ಆಡಿದ್ದ ಮೂರು ಪಂದ್ಯಗಳಲ್ಲಿ ಆರ್ಸಿಬಿ ಸೋಲನ್ನು ಕಂಡಿತ್ತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲೂ ಮತ್ತೆ ಮೂರನೇ ಸ್ಥಾನಕ್ಕೆ ತಲುಪಿ ಮುಂಬೈ ತಂಡವನ್ನು ಹಿಂದಿಕ್ಕಿದೆ.