ಕೊನೆಗೂ ತವರಿನಲ್ಲಿ ಗೆಲುವಿನ ಬಾವುಟ ನೆಟ್ಟ RCB: ಅಂಕಪಟ್ಟಿಯಲ್ಲಿ ಮೇಲೇರಿದ ಬೆಂಗಳೂರು​​!

- Advertisement -

- Advertisement -

ರಾಜಸ್ಥಾನ ರಾಯಲ್ಸ್​ ವಿರುದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಬೆಂಗಳೂರು ಪಡೆ ವಿರಾಟ್​ ಕೊಹ್ಲಿ (70) ಮತ್ತು ಕನ್ನಡಿಗ ಪಡಿಕ್ಕಲ್​ (50) ಅವರ ಅರ್ಧಶತಕ ಸಹಾಯದಿಂದ ನಿಗದಿತ 20 ಓವರ್ ​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 205 ರನ್ ​ಗಳನ್ನು ಕಲೆಹಾಕಿತ್ತು.

ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್​ ತಂಡ ಆರ್​ಸಿಬಿ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ 11 ರನ್​ಗಳಿಂದ ಸೋಲನ್ನು ಕಂಡಿತು. ತಂಡದ ಪರ ಜೈಸ್ವಾಲ್​ (49), ಧ್ರುವ್​ ಜುರೆಲ್​ (47) ಉತ್ತಮ ಪ್ರದರ್ಶನ ನೀಡಿದರು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧಯವಾಗಲಿಲ್ಲ.

- Advertisement -

ಆರ್​ಸಿಬಿ ಪರ ಹೆಜೆಲ್​ವುಡ್​ 4 ವಿಕೆಟ್​ ಪಡೆದರೆ, ಕೃನಾಲ​ ಪಾಂಡ್ಯ 2, ಭುವನೇಶ್ವರ್​ ಮತ್ತು ಯಶ್​ ದಯಾಲ್​ ತಲಾ ಒಂದು ವಿಕೆಟ್​ ಪಡೆದು ತಂಡಕ್ಕೆ ನೆರವಾದರು. ಇದರೊಂದಿಗೆ ಆರ್​ಸಿಬಿ ತವರಿನಲ್ಲಿನ ಸೋಲಿನ ಓಟಕ್ಕೆ ಬ್ರೇಕ್​ ಹಾಕಿತು. ಈ ಹಿಂದೆ ತವರಿನಲ್ಲಿ ಆಡಿದ್ದ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಸೋಲನ್ನು ಕಂಡಿತ್ತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲೂ ಮತ್ತೆ ಮೂರನೇ ಸ್ಥಾನಕ್ಕೆ ತಲುಪಿ ಮುಂಬೈ ತಂಡವನ್ನು ಹಿಂದಿಕ್ಕಿದೆ.

- Advertisement -


Must Read

Related Articles