ಸಂಘಪರಿವಾರದಿಂದ ಮುಸ್ಲಿಮ್ ಯುವಕನ ಹತ್ಯೆ

Prasthutha|

ರಾಂಚಿ: ಜಾರ್ಖಂಡ್ ನ ಮಂದಾರ್ ನಲ್ಲಿ ಮುಸ್ಲಿಂ ಯುವಕನನ್ನು ಸಂಘಪರಿವಾರದ ಗುಂಪೊಂದು ಬರ್ಬರವಾಗಿ ಹತ್ಯೆಗೈದ ಆರೋಪದಡಿಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

19 ವರ್ಷದ ಶಹಬಾಜ್ ಅನ್ಸಾರಿ ಮೃತ ವ್ಯಕ್ತಿ.  ಆರೋಪಿಗಳು ಆತನ ಇಬ್ಬರು ಸ್ನೇಹಿತರಾದ  ಓಂಪ್ರಕಾಶ್ ಮಹತೋ (25) ಮತ್ತು ಸುಶಾಂತ್ ನಾಯಕ್ (25) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 25 ರಂದು ಈ ಕೊಲೆ ನಡೆದಿದ್ದು, ಸಂತ್ರಸ್ತ ಅನ್ಸಾರಿಯನ್ನು ಆತನ ಇಬ್ಬರು ಹಿಂದೂ ಸ್ನೇಹಿತರು ತಮ್ಮ ಸಹೋದರಿಯೊಂದಿಗೆ ಸ್ನೇಹದಿಂದ ವರ್ತಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಈ ಸಂಬಂಧ ಮಂದಾರ್ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಅನ್ಸಾರಿಯ ತಂದೆ ಪ್ರಕರಣ ದಾಖಲಿಸಿದ್ದರು. ಮಹತೋ ಮತ್ತು ನಾಯಕ್ ಅವರು ಅಪರಾಧವನ್ನು ಒಪ್ಪಿಕೊಂಡ ನಂತರ ಸೆಪ್ಟೆಂಬರ್ 27 ರಂದು ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ), 34 (ಸಾಮಾನ್ಯ ಉದ್ದೇಶವನ್ನು ಮುಂದುವರಿಸಲು ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು 120 (ಬಿ) (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

Join Whatsapp