Home ಟಾಪ್ ಸುದ್ದಿಗಳು ಸಿಡಿ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಬಂಧನವಾಗಬೇಕು : ಸಂತ್ರಸ್ತೆ ಪರ ವಕೀಲ ಜಗದೀಶ್ ಗೌಡ...

ಸಿಡಿ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಬಂಧನವಾಗಬೇಕು : ಸಂತ್ರಸ್ತೆ ಪರ ವಕೀಲ ಜಗದೀಶ್ ಗೌಡ ಹೇಳಿಕೆ

►ನ್ಯಾಯಾಲಯ ಅನುಮತಿಸಿದ್ರೆ ಮರುಕ್ಷಣವೇ ಯುವತಿ ಹಾಜರು !
►‘ಪ್ರಸ್ತುತ’ ಜೊತೆ ಜಗದೀಶ್ ಗೌಡ Exclusive ಸಂದರ್ಶನ

ಬೆಂಗಳೂರು : ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಅವರನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಗೌಡ ಹೇಳಿದ್ದಾರೆ. ‘ಪ್ರಸ್ತುತ’ ದ ಜೊತೆ ಮಾತನಾಡಿದ ಜಗದೀಶ್ ಅವರು, ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅನುಮತಿ ಕೇಳಿದ್ದೆವೆ. ಒಂದು ವೇಳೆ ನ್ಯಾಯಾಲಯ ಅನುಮತಿ ನೀಡಿದ ಮರು ಕ್ಷಣದಲ್ಲೇ ಆಕೆಯನ್ನು ನಾವು ಹಾಜರುಪಡಿಸುತ್ತೇವೆ ಎಂದು ಹೇಳಿದ್ದಾರೆ.

ಆರೋಪಿ ಪ್ರಭಾವಿ ಆಗಿರೋದರಿಂದ ಯುವತಿಯ ರಕ್ಷಣೆ ಬಹು ಮುಖ್ಯವಾಗಿದೆ. ಆದುದರಿಂದ ಮಾನ್ಯ ನ್ಯಾಯಾಲಯ ರಕ್ಷಣೆ ನೀಡಿದರೆ ಖಂಡಿತವಾಗಿಯೂ ಆಕೆಯನ್ನು ನಾವು ಹೇಳಿಕೆ ನೀಡಲು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ” ಎಂದವರು ಹೇಳಿದ್ದಾರೆ.

CD Case; ಆರೋಪಿ Ramesh Jarkiholi ಬಂಧನವಾಗಬೇಕು:  Advocate Jagadesh | Prasthutha Exclusive
Join Whatsapp
Exit mobile version