Home ಟಾಪ್ ಸುದ್ದಿಗಳು ಬಂಧನ ಭೀತಿ | ಸಂತ್ರಸ್ತೆ ಪ್ರತ್ಯಕ್ಷಳಾದ ಬಳಿಕ ರಮೇಶ್ ಜಾರಕಿಹೊಳಿ ನಾಪತ್ತೆ !

ಬಂಧನ ಭೀತಿ | ಸಂತ್ರಸ್ತೆ ಪ್ರತ್ಯಕ್ಷಳಾದ ಬಳಿಕ ರಮೇಶ್ ಜಾರಕಿಹೊಳಿ ನಾಪತ್ತೆ !

ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ದಿನದಿಂದ ದಿನಕ್ಕೆ ತಿರುವುದು ಪಡೆಯುತ್ತಿದೆ. ನಿನ್ನೆಯಷ್ಟೇ ಸಂತ್ರಸ್ತೆ ಪ್ರತ್ಯಕ್ಷಳಾಗಿ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಿದ ಬಳಿಕ ಹಗರಣ ಪ್ರಮುಖ ರೂವಾರಿಯಾಗಿರುವ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಿನ್ನೆ ಕೊಲ್ಹಾಪುರದ ಮಂದಿರವೊಂದಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ನಾಪತ್ತೆಯಾಗಿದ್ದಾರೆ.

ಪ್ರಕರಣ ಕಾವೇರುತ್ತಿದ್ದ ಸಂದರ್ಭದಲ್ಲಿ ಪ್ರತಿ ದಿನ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡುತ್ತಿದ್ದ ಜಾರಕಿಹೊಳಿ, ನಿನ್ನೆ ಯುವತಿ ಬಂದು ಹೇಳಿಕೆ ದಾಖಲಿಸಿದ ಬಳಿಕ  ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅವರು ಬಂಧನ ಭೀತಿಯಿಂದ ಅಜ್ಞಾತ ಸ್ಥಳದಲ್ಲಿ ಇದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

Join Whatsapp
Exit mobile version