Home ಟಾಪ್ ಸುದ್ದಿಗಳು ರೈತ ಮುಖಂಡ ರಾಕೇಶ್ ಟಿಕಾಯತ್ ಕಾರಿನ ಮೇಲೆ ಗುಂಡಿನ ದಾಳಿ

ರೈತ ಮುಖಂಡ ರಾಕೇಶ್ ಟಿಕಾಯತ್ ಕಾರಿನ ಮೇಲೆ ಗುಂಡಿನ ದಾಳಿ

ರಾಜಸ್ಥಾನ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಕಾರಿನ ಮೇಲೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

 ಇದರಿಂದ ರಾಕೇಶ್ ಟಿಕಾಯತ್ ಅವರ ಕಾರಿನ ಕಿಟಕಿಗಳು ಒಡೆದಿದೆ.ಈ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತತಾರ್ಪುರ್ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ರಾಕೇಶ್ ಟಿಕಾಯತ್ ಅವರ ಕಾರು ಹರ್ಸೋರಾದಲ್ಲಿ ನಡೆದ ಸಭೆಯನ್ನು ಮುಗಿಸಿ ಬನ್ಸೂರ್‌ಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ ಎನ್ನಲಾಗಿದೆ. ರೈತ ನಾಯಕ ಟ್ವಿಟ್ಟರ್‌ನಲ್ಲಿ ಹಾನಿಗೊಳಗಾದ ಕಾರಿನ ವಿಡಿಯೋ ಹಂಚಿಕೊಂಡಿದ್ದು, ಈ ದಾಳಿಯನ್ನು ‘ಬಿಜೆಪಿ ಗೂಂಡಾಗಳು’ ಮಾಡಿದ್ದಾರೆ ಎಂದು ಹೇಳಿದ್ದಾರೆ.’ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತತಾರ್ಪುರ ಗ್ರಾಮದಲ್ಲಿ ಬಿಜೆಪಿ ಗೂಂಡಾಗಳಿಂದ ಹಲ್ಲೆ, ಪ್ರಜಾಪ್ರಭುತ್ವದ ಸಾವು ‘ಎಂದು ಟಿಕಾಯತ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ದೆಹಲಿ-ಉತ್ತರ ಪ್ರದೇಶ ಘಾಝಿಪುರದಲ್ಲಿ ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದಾರೆ. ಈಗ ನಾಲ್ಕು ತಿಂಗಳಿನಿಂದ ಗಡಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ.

Join Whatsapp
Exit mobile version