Home ಟಾಪ್ ಸುದ್ದಿಗಳು ಜಲಿಯಾನ್‌ವಾಲಾ ಬಾಗ್‌ ಸ್ಮಾರಕ ನವೀಕರಣ ಹುತಾತ್ಮರಿಗೆ ಅವಮಾನ| ರಾಹುಲ್ ಆಕ್ರೋಶ

ಜಲಿಯಾನ್‌ವಾಲಾ ಬಾಗ್‌ ಸ್ಮಾರಕ ನವೀಕರಣ ಹುತಾತ್ಮರಿಗೆ ಅವಮಾನ| ರಾಹುಲ್ ಆಕ್ರೋಶ

ಹೊಸದಿಲ್ಲಿ: ಜಲಿಯಾನ್‌ವಾಲಾ ಬಾಗ್‌ ಸ್ಮಾರಕವನ್ನು ನವೀಕರಿಸಲು ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಹುತಾತ್ಮರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, ಸ್ಮಾರಕದ ನವೀಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಆಕ್ರೋಶದ ವರದಿಯನ್ನು ಟ್ಯಾಗ್ ಮಾಡಿ ಹುತಾತ್ಮ ಎಂಬ ಪದದ ಅರ್ಥ ತಿಳಿಯದವರು ಮಾತ್ರ ಹೀಗೆ ಹುತಾತ್ಮರಿಗೆ ಅವಮಾನ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನಾನು ಹುತಾತ್ಮರ ಮಗ. ಹುತಾತ್ಮರಿಗೆ ಮಾಡಿರುವ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂಥ ಕ್ರೌರ್ಯದ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಜಲಿಯನ್ ವಾಲಾಬಾಗ್ ಸ್ಮಾರಕ ನವೀಕರಣಗೊಳಿಸಿ ಲೋಕಾರ್ಪಣೆ ಮಾಡಿದ್ದರು.

Join Whatsapp
Exit mobile version