Home ಟಾಪ್ ಸುದ್ದಿಗಳು ಬೆಂಗಳೂರಿನಿಂದ ರಾಹುಲ್ ಗಾಂಧಿ, ಎಸ್‌ಎಂ ಕೃಷ್ಣ ನಾಮಪತ್ರ: ಮಂಡ್ಯದಿಂದ ಹೆಚ್‌ಡಿ ರೇವಣ್ಣ ಸ್ಪರ್ಧೆ!

ಬೆಂಗಳೂರಿನಿಂದ ರಾಹುಲ್ ಗಾಂಧಿ, ಎಸ್‌ಎಂ ಕೃಷ್ಣ ನಾಮಪತ್ರ: ಮಂಡ್ಯದಿಂದ ಹೆಚ್‌ಡಿ ರೇವಣ್ಣ ಸ್ಪರ್ಧೆ!

ಗಳೂರು: ಮೊದಲ ಹಂತದಲ್ಲಿ ಮತ ದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಅಖಾಡ ಬಹುತೇಕ ಸಿದ್ಧಗೊಂಡಿದೆ.ಈವರೆಗೆ ಒಟ್ಟು 333 ಪುರುಷರು ಹಾಗೂ 25 ಮಹಿಳಾ ಅಭ್ಯರ್ಥಿಗಳ ಸಹಿತ 358 ಹುರಿಯಾಳುಗಳು ಸೇರಿ ಒಟ್ಟು 492 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರ ಹೆಸರು ಇರುವ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಗಮನ ಸೆಳೆದಿದ್ದಾರೆ.

ಮಂಡ್ಯದಲ್ಲಿ ಎಚ್‌.ಡಿ. ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಪೂರ್ವಾಂಚಲ್‌ ಮಹಾಪಂಚಾಯತ್‌ ಎನ್ನುವ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ರಾಹುಲ್‌ ಗಾಂಧಿ ಎನ್‌. ಹಾಗೂ ಎಸ್‌.ಎಂ. ಕೃಷ್ಣ ಹೆಸರಿನ ಪಕ್ಷೇತರ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಡಾ| ಸಿ.ಎನ್‌. ಮಂಜುನಾಥ್‌ ಎದುರು ಮಂಜುನಾಥ್‌ ಕೆ., ಮಂಜುನಾಥ್‌ ಎನ್‌., ಮಂಜುನಾಥ್‌ ಸಿ., ಬಿಎಸ್‌ಪಿಯಿಂದ ಮಂಜುನಾಥ ಸಿ.ಎನ್‌. ಎಂಬ ಒಂದೇ ಹೆಸರಿನ ಹಲವರು ಉಮೇದುವಾರಿಕೆ ಸಲ್ಲಿಸಿದ್ದಾರೆ.

Join Whatsapp
Exit mobile version