ಹಣಕಾಸಿನ ವಿಚಾರದಲ್ಲಿ ಜಗಳ: ತಮ್ಮನಿಂದಲೇ ಅಣ್ಣನ ಕೊಲೆ

Prasthutha|

ಮಂಡ್ಯ: ಹಣಕಾಸಿನ ವಿಷಯಕ್ಕೆ ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಡ್ಯ ನಗರದ ವಿದ್ಯಾನಗರದಲ್ಲಿ ನಡೆದಿದೆ.

- Advertisement -


ವಿದ್ಯಾನಗರ ನಿವಾಸಿ ಮಹೇಶ್ (45) ತಮ್ಮನಿಂದ ಕೊಲೆಯಾಗಿರುವ ಅಣ್ಣ. ರೇಣುಕಾ ಪ್ರಸಾದ್ ಕೊಲೆ ಆರೋಪಿ. ಈತ ಖಾಸಗಿ ಸಹಕಾರ ಸಂಘದಲ್ಲಿ ಜಾಮೀನಿನ ಮೇಲೆ ಅಣ್ಣನಿಗೆ ಸಾಲ ಕೊಡಿಸಿದ್ದ. ಈರುಳ್ಳಿ ವ್ಯಾಪಾರ ಮಾಡುತ್ತಿದ್ದ. ಮಹೇಶ್ ನಷ್ಟದಿಂದಾಗಿ ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಸಿಟ್ಟಿನಿಂದ ಅಣ್ಣನ ಎದೆಗೆ ತಮ್ಮ ಚಾಕು ಇರಿದು ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಪಶ್ಚಿಮ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp