Home ಕರಾವಳಿ ಪುತ್ತೂರು: ನೆಲಕ್ಕೆ ತಾಗುವಂತೆ ರಾಷ್ಟ್ರಧ್ವಜ ಕಟ್ಟಿದ ಅಂಗಡಿ ಮಾಲಕ: ಪೊಲೀಸರಿಂದ ತೆರವು

ಪುತ್ತೂರು: ನೆಲಕ್ಕೆ ತಾಗುವಂತೆ ರಾಷ್ಟ್ರಧ್ವಜ ಕಟ್ಟಿದ ಅಂಗಡಿ ಮಾಲಕ: ಪೊಲೀಸರಿಂದ ತೆರವು

ಪುತ್ತೂರು: ಹರ್ ಘರ್ ತಿರಂಗ ಅಂಗವಾಗಿ ದೇಶಾದ್ಯಂತ ಜನರು ತಮ್ಮ ಮನೆ, ಅಂಗಡಿಗಳಲ್ಲಿ ದೇಶದ ಧ್ವಜವನ್ನು ಕಟ್ಟಿ ಬೆಂಬಲಿಸುತ್ತಿದ್ದಾರೆ. ಆದರೆ ಪುತ್ತೂರಿನ ಕೂರ್ನಡ್ಕ ಜಂಕ್ಷನ್ ಬಳಿ ರಾಷ್ಟ್ರ ಧ್ವಜವನ್ನು ನೆಲಕ್ಕೆ ತಾಗುವಂತೆ ಕಟ್ಟಲಾಗಿದ್ದು, ಆಕ್ರೋಶ ವ್ಯಕ್ತವಾದ ಬಳಿಕ ತೆರವು ಗೊಳಿಸಲಾಗಿದೆ.


ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಧ್ವಜವನ್ನು ತೆರವುಗೊಳಿಸಿ ಅಂಗಡಿ ಮಾಲಕನ ವಿರುದ್ಧ ಕ್ರಮಕ್ಕೆ ನಿರ್ಧಾರ ಮಾಡಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Join Whatsapp
Exit mobile version