Home ಕರಾವಳಿ ಪುತ್ತೂರು: ಇಸ್ಲಾಮ್ ಜಗತ್ತಿಗೆ ಕಂಟಕ ಎಂದ ಅರ್ಚಕನಿಂದ ಕಾಂಗ್ರೆಸ್ ಕಚೇರಿಯ ಪೂಜೆಗೆ ನೇತೃತ್ವ !

ಪುತ್ತೂರು: ಇಸ್ಲಾಮ್ ಜಗತ್ತಿಗೆ ಕಂಟಕ ಎಂದ ಅರ್ಚಕನಿಂದ ಕಾಂಗ್ರೆಸ್ ಕಚೇರಿಯ ಪೂಜೆಗೆ ನೇತೃತ್ವ !

ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಸದಾ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಹಾಗೂ ಇತ್ತೀಚೆಗೆ ಪ್ರತಿಭಟನೆಯೊಂದರಲ್ಲಿ ಇಸ್ಲಾಮ್ ಜಗತ್ತಿಗೆ ಕಂಟಕ ಎಂದ ಅರ್ಚಕನಿಗೆ ಪೂಜೆಯ ನೇತೃತ್ವ ನೀಡಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಆಕ್ರೋಶಕ್ಕೆ ಕಾರಣವಾಗಿದೆ.


ಶ್ರೀ ಕೃಷ್ಣ ಉಪಾಧ್ಯಾಯ ಒಬ್ಬ ಮತಾಂಧ ವ್ಯಕ್ತಿಯಾಗಿದ್ದು, ಹಿಂದುತ್ವ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದಾನೆ. ಈತನಿಗೆ ಬ್ಲಾಕ್ ಕಾಂಗ್ರೆಸ್ ಕಚೇರಿಯ ಪೂಜೆಗೆ ನೇತೃತ್ವ ಕೊಟ್ಟಿದ್ದು, ಮಾಜಿ ಶಾಸಕಿಯ ಜಾತ್ಯತೀತ ನಿಲುವಿನ ಮೇಲೆಯೇ ಸಂಶಯ ಬರುವಂತೆ ಮಾಡಿದೆ ಎಂದು ಹಲವು ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇತ್ತೀಚಿಗೆ ನಡೆದ ಪ್ರತಿಭಟನೆಯಲ್ಲಿ, ಇಡೀ ಇಸ್ಲಾಮ್ ಹಿಂದೂಗಳಿಗೆ ಮಾತ್ರವಲ್ಲ ಭೂಮಿಗೆ ಕಂಟಕ. ಇಸ್ಲಾಮನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಶ್ರೀ ಕೃಷ್ಣ ಉಪಾಧ್ಯಾಯ ನಾಲಗೆ ಹರಿಯಬಿಟ್ಟಿದ್ದ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹ ವ್ಯಕ್ತಿಯನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಆತಿಥ್ಯ ನೀಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಪ್ರಶ್ನಿಸುತ್ತಿದ್ದಾರೆ.

Join Whatsapp
Exit mobile version