Home ಟಾಪ್ ಸುದ್ದಿಗಳು ಪುನೀತ್ ಬಂಧನ ಆಗಿದೆ, ಉಳಿದ ಆರೋಪಿಗಳ ಬಂಧನಕ್ಕೆ 4 ದಿನಗಳ ಕಾಲಾವಕಾಶ ಕೊಡಿ: ಪ್ರತಿಭಟನಕಾರರಿಗೆ ಪೊಲೀಸರ...

ಪುನೀತ್ ಬಂಧನ ಆಗಿದೆ, ಉಳಿದ ಆರೋಪಿಗಳ ಬಂಧನಕ್ಕೆ 4 ದಿನಗಳ ಕಾಲಾವಕಾಶ ಕೊಡಿ: ಪ್ರತಿಭಟನಕಾರರಿಗೆ ಪೊಲೀಸರ ಹೇಳಿಕೆ

ಬೆಂಗಳೂರು: ಇದ್ರೀಸ್ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಬಂಧನಕ್ಕೆ ಆಗ್ರಹಿಸಿ SDPI ಹಾಗೂ ವಿವಿಧ ದಲಿತಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕನಕಪುರದ ಸರ್ಕಲ್ ಇನ್ಸ್’ಪೆಕ್ಟರ್ ಕಚೇರಿ ಮುಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪುನೀತ್ ಬಂಧನ ಆಗಿದೆ ಎಂದಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ 4 ದಿನಗಳ ಗಡುವು ನೀಡಲಾಗಿದೆ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕನಕನಪುರ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿ ಮುಭಾಗ ಪ್ರತಿಭಟನೆ ನಡೆಸಿದ ವೇಳೆ ಸಂಘಪರಿವಾರದ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ನಾಲ್ಕು ದಿನ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿಸಿದರು.


ಮಾನ್ಯ ಕರ್ನಾಟಕ ಡಿಜಿಪಿ, @spramanagara ಅವರೇ ಈ ಕೊಲೆಗಾರನಿಗೆ ಬೆಂಬಲವಾಗಿ ನಿಂತಿರುವ ಮತ್ತು ಕುಮ್ಮಕ್ಕು ನೀಡುತ್ತಿರುವವರು ಯಾರು? ಈತನಿಗೆ ಮತ್ತು BJP ಯ ನಾಯಕರುಗಳಿಗೂ ಇರುವ ಸಂಬಂಧ ಎಂತಹುದು? ಈತನಿಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು?ಈ ಎಲ್ಲಾ ಅಂಶಗಳ ಬಗ್ಗೆ ವಿಚಾರಣೆ ನಡೆಸಬೇಕೆಂದು ಆಗ್ರಹಿಸುತ್ತೇನೆ ಎಂದು ಅಫ್ಸರ್ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version