Home ಟಾಪ್ ಸುದ್ದಿಗಳು ಖಾಸಗಿ ಬಸ್ ಅಪಘಾತ: 6 ವಲಸೆ ಕಾರ್ಮಿಕರ ದಾರುಣ ಸಾವು

ಖಾಸಗಿ ಬಸ್ ಅಪಘಾತ: 6 ವಲಸೆ ಕಾರ್ಮಿಕರ ದಾರುಣ ಸಾವು

ರಾಯ್​ಗಂಜ್​: ಖಾಸಗಿ ಬಸ್ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ್ ಜಿಲ್ಲೆಯ ರಾಯ್​ಗಂಜ್‌ನಲ್ಲಿ ನಡೆದಿದೆ.

ಬಸ್​ ಅಪಘಾತ 6 ಮಂದಿಯ ಶವಗಳನ್ನು ಹೊಂಡಕ್ಕೆ ಬಿದ್ದ ಬಸ್​ನಿಂದ ಹೊರ ತೆಗೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸನಾ ಅಖ್ತರ್ ಖಚಿತಪಡಿಸಿದ್ದಾರೆ.

ನಿನ್ನೆ ರಾತ್ರಿ 10:45ರ ಸುಮಾರಿಗೆ ರಾಯ್​​​ ಗಂಜ್‌ ನ ರೂಪಹಾರ್ ಪ್ರದೇಶದ ಬಳಿ ಈ ದುರಂತ ಸಂಭವಿಸಿದೆ. ಪೊಲೀಸರ ಪ್ರಕಾರ, ವಲಸೆ ಕಾರ್ಮಿಕರು ಜಾರ್ಖಾಂಡ್‌ ನಿಂದ ಲಖನೌಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆಗ ಸ್ಥಳೀಯ ನಿವಾಸಿಗಳು ಮೊದಲು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು ಎಂದು ತಿಳಿಸಿದರು.

Join Whatsapp
Exit mobile version