ಖಾಸಗಿ ಬಸ್ ಅಪಘಾತ: 6 ವಲಸೆ ಕಾರ್ಮಿಕರ ದಾರುಣ ಸಾವು

Prasthutha|

ರಾಯ್​ಗಂಜ್​: ಖಾಸಗಿ ಬಸ್ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ್ ಜಿಲ್ಲೆಯ ರಾಯ್​ಗಂಜ್‌ನಲ್ಲಿ ನಡೆದಿದೆ.

- Advertisement -

ಬಸ್​ ಅಪಘಾತ 6 ಮಂದಿಯ ಶವಗಳನ್ನು ಹೊಂಡಕ್ಕೆ ಬಿದ್ದ ಬಸ್​ನಿಂದ ಹೊರ ತೆಗೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸನಾ ಅಖ್ತರ್ ಖಚಿತಪಡಿಸಿದ್ದಾರೆ.

ನಿನ್ನೆ ರಾತ್ರಿ 10:45ರ ಸುಮಾರಿಗೆ ರಾಯ್​​​ ಗಂಜ್‌ ನ ರೂಪಹಾರ್ ಪ್ರದೇಶದ ಬಳಿ ಈ ದುರಂತ ಸಂಭವಿಸಿದೆ. ಪೊಲೀಸರ ಪ್ರಕಾರ, ವಲಸೆ ಕಾರ್ಮಿಕರು ಜಾರ್ಖಾಂಡ್‌ ನಿಂದ ಲಖನೌಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆಗ ಸ್ಥಳೀಯ ನಿವಾಸಿಗಳು ಮೊದಲು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು ಎಂದು ತಿಳಿಸಿದರು.

Join Whatsapp