Home ಟಾಪ್ ಸುದ್ದಿಗಳು ರಾಷ್ಟ್ರಪತಿ ಕೋವಿಂದ್ ಭೇಟಿ ವೇಳೆ ಟ್ರಾಫಿಕ್‌ ತಡೆ; ಮಹಿಳೆ ಸಾವು : ಪೊಲೀಸರಿಂದ ಕ್ಷಮೆ ಯಾಚನೆ

ರಾಷ್ಟ್ರಪತಿ ಕೋವಿಂದ್ ಭೇಟಿ ವೇಳೆ ಟ್ರಾಫಿಕ್‌ ತಡೆ; ಮಹಿಳೆ ಸಾವು : ಪೊಲೀಸರಿಂದ ಕ್ಷಮೆ ಯಾಚನೆ

ಲಖನೌ : ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭೇಟಿಯ ವೇಳೆ ಮಾಡಲಾದ ಟ್ರಾಫಿಕ್‌ ತಡೆಯಿಂದಾಗಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಕುಟುಂಬಿಕರಲ್ಲಿ ಕ್ಷಮೆ ಯಾಚಿಸಿದ್ದಾರೆ.

ರಾಷ್ಟ್ರಪತಿ ಕೋವಿಂದ್‌ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಉತ್ತರ ಪ್ರದೇಶಕ್ಕೆ ಬಂದಿದ್ದರು. ಕಾನ್ಪುರಕ್ಕೆ ನಿನ್ನೆ ರಾತ್ರಿ ಅವರ ರೈಲು ಆಗಮಿಸಿತ್ತು.

ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಇಂಡಸ್ಟ್ರೀಸ್‌ ನ ಕಾನ್ಪುರ ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ವಂದನಾ ಮಿಶ್ರಾ ಸಾವಿಗೀಡಾದ ಮಹಿಳೆ. ಕೋವಿಡ್‌ ನಿಂದ ಇತ್ತೀಚೆಗೆ ಗುಣಮುಖರಾಗಿದ್ದ ವಂದನಾ ನಿನ್ನೆ ಹಠಾತ್‌ ಅನಾರೋಗ್ಯಕ್ಕೆ ಗುರಿಯಾದುದರಿಂದ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತಿತ್ತು.

ವಂದನಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದ ಮಾರ್ಗದಲ್ಲೇ ರಾಷ್ಟ್ರಪತಿ ಅವರೂ ಹಾದು ಹೋಗಲಿದ್ದುದರಿಂದ, ರಸ್ತೆ ತಡೆ ಹಿಡಿಯಲಾಗಿತ್ತು. ಇದರಿಂದಾಗಿ ವಾಹನಗಳು ಸಾಲುಗಟ್ಟು ನಿಲ್ಲುವಂತಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಂದನಾ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

Join Whatsapp
Exit mobile version