Home ಟಾಪ್ ಸುದ್ದಿಗಳು ಹೊಂಡಮಯವಾದ ಹೆದ್ದಾರಿ; ಸಂಕಷ್ಟದಲ್ಲಿ ವಾಹನ ಸವಾರರು

ಹೊಂಡಮಯವಾದ ಹೆದ್ದಾರಿ; ಸಂಕಷ್ಟದಲ್ಲಿ ವಾಹನ ಸವಾರರು

ಆಲ್ದೂರು: ಚಿಕ್ಕಮಗಳೂರು- ಶೃಂಗೇರಿ, ಹೊರನಾಡು, ಕೊಪ್ಪ, ರಂಭಾಪುರಿ ಪೀಠ, ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ತುಡುಕೂರು – ತೋರಣ ಮಾವು ಗ್ರಾಮದ ನಡುವೆ ಹಾದುಹೋಗುವ ರಾಜ್ಯ ಹೆದ್ದಾರಿ ಹೊಂಡಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.


ಈ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಾಸಿಗರು ಸಂಚರಿಸುತ್ತಿದ್ದು, ಹೆಜ್ಜೆಗೊಂದರಂತೆ ಗುಂಡಿಗಳಿವೆ. ಇದೇ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೀಡಾಗಿತ್ತು.
‘ಲೋಕೋಪಯೋಗಿ ಇಲಾಖೆ, ರಸ್ತೆ ಪ್ರಾಧಿಕಾರ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ತಕ್ಷಣ ಮುಂದಾಗಬೇಕು’ ಎಂದು ಸ್ಥಳೀಯ ಪ್ರಮುಖರು ಒತ್ತಾಯಿಸಿದ್ದಾರೆ.

Join Whatsapp
Exit mobile version