ಕೊರಗರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ COD ತನಿಖೆಗೆ

Prasthutha|

ಉಡುಪಿ: ಕೋಟತಟ್ಟುವಿನಲ್ಲಿ ಕೊರಗರ ಮೇಲಿನ  ಪೊಲೀಸ್ ದೌರ್ಜನ್ಯ ವಿರುದ್ಧ ದೂರು ದಾಖಲಿಸಿರುವ ಪ್ರಕರಣದ ತನಿಖೆಯನ್ನು ಸಿಒಡಿಗೆ ನೀಡುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -

ಶುಕ್ರವಾರ ಕೋಟತಟ್ಟುವಿನ ಕೊರಗ ಸಮುದಾಯದ ಮನೆಗೆ ಭೇಟಿ ನೀಡಿದ ಅವರು, ಪೊಲೀಸರು ದೂರು ದಾಖಲಿಸಿದ 6 ಮಂದಿಗೆ ತಲಾ 2 ಲಕ್ಷ ಪರಿಹಾರ ನೀಡುವ ಘೋಷಣೆ ಮಾಡಿದರು ಹಾಗೂ ಸ್ಥಳದಲ್ಲಿ ಯೇ ಮೊದಲ ಕಂತಾಗಿ‌ 50,000 ಸಾವಿರ ರೂ. ಚೆಕ್ ನ್ನು 6 ಮಂದಿಗೆ ವಿತರಿಸಿದರು.

ಈ ಕುರಿತು ಮಾತನಾಡಿದ ಅವರು,ಕೊರಗ ಸಮುದಾಯವರು ಹೆದರುವ ಅಗತ್ಯ ಇಲ್ಲ ಸರಕಾರ ಹಾಗೂ ಅಧಿಕಾರಿಗಳು ನಿಮ್ಮ ಜೊತೆಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕೆರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ  ಎಂದು ಭರವಸೆ ನೀಡಿದರು.

Join Whatsapp