ಕಷ್ಟಗಳಿದ್ದರೆ ಮಾತ್ರ ಸುಖದ ಬೆಲೆ ತಿಳಿಯುವುದು | ಪೆಟ್ರೋಲ್ ಬೆಲೆ ಏರಿಕೆಗೆ ಸಮರ್ಥನೆ ನೀಡಿದ ಬಿಜೆಪಿ ಸಚಿವ

Prasthutha|

ಭೋಪಾಲ್ : ದಿನೇ ದಿನೇ ಏರುತ್ತಿರುವ ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆಯ ವಿರುದ್ಧ ದೇಶದಾದ್ಯಂತ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಸಚಿವ ಓಂ ಪ್ರಕಾಶ್ ಸಕ್ಲೆಚಾ ಅವರು ವಿಭಿನ್ನ ವಾಗಿ ಸಮರ್ಥಿಸಿಕೊಂಡ್ಡಿದ್ದಾರೆ.

- Advertisement -


ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಓಂ ಪ್ರಕಾಶ್‌, “ಕಷ್ಟಗಳು ನಿಮಗೆ ಒಳ್ಳೆಯ ಸಮಯದ ಸಂತೋಷವನ್ನು ಅರಿಯಲು ಸಹಾಯ ಮಾಡುತ್ತದೆ. ಯಾವುದೇ ತೊಂದರೆ ಇಲ್ಲದಿದ್ದರೆ, ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ” ಎಂದು ದೇಶದಲ್ಲಿ ಏರುತ್ತಿರುವ ಇಂಧನ ದರಗಳ ಬಗ್ಗೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂಧನ ದರದ ತೀವ್ರ ಏರಿಕೆ ತಡೆಯುವುದರಲ್ಲಿ ವಿಫಲರಾಗಿದ್ದಾರೆ ಎಂಬ ಪ್ರಶ್ನೆಗೆ ಓಂ ಪ್ರಕಾಶ್ ಅವರು ಇದು ಮಾಧ್ಯಮಗಳು ಹರಡಿದ ವದಂತಿಗಳು ಎಂದು ಹೇಳಿದ್ದಾರೆ.

- Advertisement -

ತಮ್ಮ ಪಕ್ಷದ ಸರ್ಕಾರವನ್ನು ಈ ಹಿಂದಿನ ಕಾಂಗ್ರೆಸ್ ಆಡಳಿತಕ್ಕೆ ಹೋಲಿಕೆ ಮಾಡಿದ ಓಂ ಪ್ರಕಾಶ್‌, ಕಾಂಗ್ರೆಸ್‌‌ ಪೋಲಿಯೊ ವಿರುದ್ಧ ಲಸಿಕೆ ನೀಡಲು 40 ವರ್ಷಗಳನ್ನು ತೆಗೆದುಕೊಂಡಿತು, ಆದರೆ ಪ್ರಧಾನಿ ಮೋದಿ ಅವರು ಒಂದು ವರ್ಷದಲ್ಲಿ ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆ ನೀಡಿದ್ದಾರೆ ಮತ್ತು ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ ಎಂದು ಹೇಳಿದ್ದಾರೆ.

Join Whatsapp