ಕಾಫಿನಾಡ ಜನರಿಗೆ ಮಳೆ ಜೊತೆ ಕಾಡಾನೆ ಕಾಟ

Prasthutha|

ಚಿಕ್ಕಮಗಳೂರು: ಕಾಫಿನಾಡ ಜನರಿಗೆ ಮಳೆ ಜೊತೆ ಕಾಡಾನೆ ಕಾಟ ಎದುರಾಗಿದೆ. ಕಾಡಾನೆಗಳ ದಾಂಧಲೆಗೆ ಒಂದು ಎಕರೆ ಕಾಫಿ ತೋಟ ನಾಶವಾದ ಘಟನೆ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement -

ಪುಷ್ಪ-ರಾಜು ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ದಾಂಧಲೆ ನಡೆಸಿರುವ ನಾಲ್ಕು ಕಾಡಾನೆಗಳ ಗುಂಪು ಕಾಫಿ ತೋಟ ನಾಶಮಾಡಿದೆ.

ಒಂದೆಡೆ ಮಳೆ ಕಾಟ, ಇನ್ನೊಂದೆಡೆ ಕಾಡಾನೆ ಕಾಟದಿಂದ ಸುಸ್ತಾಗಿರುವ ಸಂತ್ರಸ್ತರು ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Join Whatsapp
Exit mobile version