Home ರಾಜ್ಯ ಪೀರ್ ಪಾಷ ಮಸೀದಿ, ಅನುಭವ ಮಂಟಪ ಅಲ್ಲ: ಬಸವಲಿಂಗ ಪಟ್ಟದೇವರು ಸ್ವಾಮೀಜಿ ಸ್ಪಷ್ಟನೆ

ಪೀರ್ ಪಾಷ ಮಸೀದಿ, ಅನುಭವ ಮಂಟಪ ಅಲ್ಲ: ಬಸವಲಿಂಗ ಪಟ್ಟದೇವರು ಸ್ವಾಮೀಜಿ ಸ್ಪಷ್ಟನೆ

ಬೀದರ್: ಪೀರ್ ಪಾಷ ಮಸೀದಿ ಅನುಭವ ಮಂಟಪ ಅಲ್ಲ ಎಂದು ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದ್ದಾರೆ.

ಬೀದರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಸವಲಿಂಗ ಪಟ್ಟದೇವರು, ಬೀದರ್ ನ ಪೀರ್ ಪಾಷ ದರ್ಗಾವು ಅನುಭವ ಮಂಟಪ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು, ಇದಕ್ಕೆ ಪೂರಕವಾದ ದಾಖಲೆಗಳು ಇಲ್ಲ. ಅಂತಹ ಯಾವುದೇ ಕುರುಹುಗಳು ಇದುವರೆಗೆ ಲಭ್ಯವಾಗಿಲ್ಲ. ಸಂಶೋಧಕರು ಈ ಬಗ್ಗೆ ಸಂಶೋಧನೆ ಮಾಡಬೇಕಷ್ಟೆ. ಆದ್ದರಿಂದ ನಾವೆಲ್ಲಾ ಸಾಮರಸ್ಯದಿಂದ ಬಾಳೋಣ ಎಂದು ಅವರು ಮನವಿ ಮಾಡಿದ್ದಾರೆ.


ಪೀರ್ ಪಾಷಾ ದರ್ಗಾವೇ ಅನುಭವ ಮಂಟಪ ಎಂದು ಕೆಲವು ಸ್ವಾಮೀಜಿಗಳು ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ಲಿಂಗಾಯತ ಸ್ವಾಮೀಜಿಗಳ ಮಧ್ಯೆ ಭಿನ್ನ ಹೇಳಿಕೆಗಳು ಹೊರಬಿದ್ದಿದ್ದವು. ಇದೀಗ ಪಟ್ಟದೇವರು ಸ್ವಾಮೀಜಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

Join Whatsapp
Exit mobile version