ಆಪರೇಷನ್​ ಸಿಂಧೂರ: ಪಾಕ್​ ಉಗ್ರರ ಅಡಗು ತಾಣಗಳ ಮೇಲೆ ಭಾರತ ಕ್ಷಿಪಣಿ ದಾಳಿ

- Advertisement -

ನವದೆಹಲಿ: ಏಪ್ರಿಲ್​ 22 ರ ಪಹಲ್ಗಾಮ್​ ನಡೆದ ಉಗ್ರರ ದಾಳಿಯ ನಂತರ ವೈರಿ ರಾಷ್ಟ್ರ ಪಾಕಿಸ್ತಾನದ ಹೆಡೆಮುರಿ ಕಟ್ಟಲು ಉಗ್ರರ ಮಗ್ಗಲು ಮುರಿಯಲು ಕಾದು ಕುಳಿತಿದ್ದ ಭಾರತೀಯ ಸೇನೆ ಕೊನೆಗೂ ತನ್ನ ರಣಬೇಟೆ ಆರಂಭಿಸಿದೆ.

- Advertisement -

ಬುಧವಾರ ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಸಂಘಟನೆಯ ಪ್ರಭಾವ ಹೆಚ್ಚಿರುವ ಬಹಲ್ವಾಪುರದಲ್ಲಿ ಒಂಬತ್ತು ಶಿಬಿರಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ.

ಆಪರೇಷನ್​ ಸಿಂಧೂರ ಹೆಸರಿನಲ್ಲಿ ಈ ರಣಬೇಟೆ ನಡೆದಿರುವ ಬಗ್ಗೆ ಭಾರತೀಯ ಸೇನೆ ನಸುಕಿನಜಾವ 1:44ಕ್ಕೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

- Advertisement -

ಭಾರತ ‘ಆಪರೇಷನ್ ಸಿಂಧೂರ್’ ಆರಂಭಿಸಿತು; ಪಿಒಜೆಕೆಯಲ್ಲಿ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿ ನಡೆದಿದೆ” ಎಂದು ಭಾರತೀಯ ಸೇನೆ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಪಾಕಿಸ್ತಾನದಲ್ಲಿ ಉಗ್ರರ 9 ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆದಿದೆ, ನಮ್ಮ ಸೇನೆ ಉಗ್ರರ ಮೂಲಸೌಲಭ್ಯಗಳನ್ನು ನೆಲಸಮ ಮಾಡುವಲ್ಲಿ ಯಶಸ್ವಿಯಾಗಿದೆ. ಆದ್ರೆ ಯಾವುದೇ ನಾಗರಿಕ ಸ್ಥಳಗಳು, ಆರ್ಥಿಕ ಕಟ್ಟಡಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದೆ.

- Advertisement -


Must Read

Related Articles