Home ಟಾಪ್ ಸುದ್ದಿಗಳು ಈಶಾನ್ಯ ದಿಲ್ಲಿ ಗಲಭೆ ಪ್ರಕರಣ: ಇಶ್ರತ್ ಜಹಾನ್ ಜಾಮೀನು ಆದೇಶ ಪ್ರಶ್ನಿಸಿದ ಪೊಲೀಸರು

ಈಶಾನ್ಯ ದಿಲ್ಲಿ ಗಲಭೆ ಪ್ರಕರಣ: ಇಶ್ರತ್ ಜಹಾನ್ ಜಾಮೀನು ಆದೇಶ ಪ್ರಶ್ನಿಸಿದ ಪೊಲೀಸರು

ನವದೆಹಲಿ: 2020 ರಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಜುಲೈ 11 ರಂದು ವಿಚಾರಣೆ ನಡೆಸಲಿದೆ.

ಫೆಬ್ರವರಿ 26, 2020 ರಂದು ಆಕೆಯನ್ನು ಬಂಧಿಸಲಾಗಿತ್ತು.

ಇಶ್ರತ್ ಜಹಾನ್ ಗಲಭೆಗೆ ದೈಹಿಕವಾಗಿ ಹಾಜರಿರಲಿಲ್ಲ ಮತ್ತು ಅವರು ಯಾವುದೇ ಗುಂಪಿನ ಭಾಗವಾಗಿರಲಿಲ್ಲ ಎಂದು ಗಮನಿಸಿದ ಕೆಳ ನ್ಯಾಯಾಲಯವು ಈ ಪ್ರಕರಣದಲ್ಲಿ ಮಾರ್ಚ್ 14 ರಂದು ಆಕೆಗೆ ಜಾಮೀನು ನೀಡಿತ್ತು.

ಇಶ್ರತ್ ಅವರ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಅದರಂತೆ, ರಾಜ್ಯದ ಕೋರಿಕೆಯ ಮೇರೆಗೆ, ಈ ವಿಷಯದ ಬಗ್ಗೆ ಜುಲೈ 11 ರ ಸೋಮವಾರದಂದು ನ್ಯಾಯಾಲಯವು ವಿಚಾರಣೆ ನಡೆಸಲಿದೆ.

Join Whatsapp
Exit mobile version