Home ಟಾಪ್ ಸುದ್ದಿಗಳು ಮಾಂಸಾಹಾರ ನಿಷಿದ್ಧವಲ್ಲ, ಆದರೆ ಗೋಮಾಂಸವನ್ನು ನಿಲ್ಲಿಸಿ: RSS ನಾಯಕ ಜೆ. ನಂದ ಕುಮಾರ್

ಮಾಂಸಾಹಾರ ನಿಷಿದ್ಧವಲ್ಲ, ಆದರೆ ಗೋಮಾಂಸವನ್ನು ನಿಲ್ಲಿಸಿ: RSS ನಾಯಕ ಜೆ. ನಂದ ಕುಮಾರ್

ನವದೆಹಲಿ: ಮಾಂಸಾಹಾರ ನಿಷೇಧಿತ ಆಹಾರವಲ್ಲ.  ದೇಶದಲ್ಲಿ ಇದನ್ನು ನಿಷೇಧಿಸಲೂ ಸಾಧ್ಯವಿಲ್ಲ. ಆದರೆ ಗೋಮಾಂಸ ಸೇವನೆಯನ್ನು ಮಾತ್ರ ನಿಷೇಧಿಸಬೇಕು ಎಂದು RSS ನ ಬೌಧಿಕ ವಿಭಾಗ ‘ಪ್ರಗ್ಯಾ ಪ್ರವಾಹ್” ನ ಜೆ. ನಂದ ಕುಮಾರ್ ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರು ಮಾಂಸಾಹಾರ ಸೇವಿಸುತ್ತಾರೆ. ಇದನ್ನು ನಿಷೇಧಿಸಿ ಎಂದು ಹೇಳುವುದು ಸರಿಯಲ್ಲ. ಭೌಗೋಳಿಕ ಸಂರಚನೆಯ ಹಿನ್ನೆಲೆಯಲ್ಲಿ ಜನರು ಆಹಾರ ಸೇವಿಸುತ್ತಾರೆ. ಕರಾವಳಿ ಪ್ರದೇಶದ ಜನರು ಮತ್ತು ಈಶಾನ್ಯ ಭಾಗದ ಜನರು ಮಾಂಸಾಹಾರವನ್ನೇ ಸೇವಿಸುತ್ತಾರೆ. ಇದು ಅವರ ‘ಪ್ರಧಾನ ಆಹಾರ’ವಾಗಿದೆ  ಎಂದು ಹೇಳಿದರು.

 ಗೋಮಾಂಸ ಸೇವಿಸಬಾರದು ಎನ್ನುವುದಕ್ಕೆ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಕಾರಣಗಳಿವೆ. ಆದ್ದರಿಂದ ಗೋಮಾಂಸವನ್ನು ಸೇವಿಸಬಾರದು ಎಂದು ಹೇಳಿದರು.

ಇದು ತನ್ನ ವೈಯಕ್ತಿಕ ಅಭಿಪ್ರಾಯವೇ ಹೊರತು ಸಂಘದ ಅಭಿಪ್ರಾಯವಲ್ಲ  ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version