ದರ್ಶನ್ ಗೆ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ: ಡಿಐಜಿ ಟಿಪಿ ಶೇಷಾ

Prasthutha|

ಬಳ್ಳಾರಿ: ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಜೈಲಿನ ನಿಯಮಗಳ ಪ್ರಕಾರ ಸೌಲಭ್ಯ ಕೊಡಲಾಗಿದೆ ಎಂದು ಡಿಐಜಿ ಶೇಷಾ ಹೇಳಿದರು.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ ಹೈ ಸೆಕ್ಯುರಿಟಿ ಸೆಲ್ನಲ್ಲಿ ಇದ್ದಾರೆ. 15 ಸೆಲ್ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಖೈದಿಗಳಿದ್ದಾರೆ. ದರ್ಶನ ಅಕ್ಕಪಕ್ಕ ಯಾರು ಇಲ್ಲ. ದರ್ಶನ ಶೇಲ್ ಮುಂದೆ ಮೂರು ಸಿಸಿ ಕ್ಯಾಮರಾ ಇದೆ. ಬಾಡಿವೂರ್ನ್ ಕ್ಯಾಮೆರಾ ಮೂಲಕ ನಿಗಾವಹಿಸಲಾಗಿದೆ. ದರ್ಶನ ಮೇಲೆ ನಿಗಾ ಜಾಸ್ತಿದೆ ಎಂದು ಹೇಳಿದ್ದಾರೆ.


ದರ್ಶನ್ ಗೆ ಬೆನ್ನು ನೋವು ಇರುವ ಕಾರಣ, ಮೋಷನ್ ಸಮಸ್ಯೆಯಿಂದ ದರ್ಶನ ಊಟ ಬೇಡ ಅಂತಿದ್ದಾರೆ. ಜೈಲು ಊಟ ಸರಿಯಾಗಿ ನೀಡಲಾಗ್ತಿದೆ. ಸದ್ಯ ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್ ಗೆ ದರ್ಶನ್ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ. ಅದರ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೀವೆ ಎಂದು ಡಿಐಜಿ ಟಿಪಿ ಶೇಷಾ ಹೇಳಿದ್ದಾರೆ.



Join Whatsapp
Exit mobile version