ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಮನೆಯಲ್ಲಿ ದರೋಡೆ ನಡೆದಿಲ್ಲ: ಎಸ್​ ಪಿ ಕಾರ್ತಿಕ್ ರೆಡ್ಡಿ

Prasthutha|

ಚಾಮರಾಜನಗರ: ಬಿಜೆಪಿ ಎಂಎಲ್​ ಸಿ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರ ಮನೆಯಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂದು ರಾಮನಗರ ಎಸ್​ ಪಿ ಕಾರ್ತಿಕ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

- Advertisement -

ಮಹದೇವಯ್ಯ ಕೊಲೆ ಕೇಸ್ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಸಾಕ್ಷ್ಯಾಧಾರ ಸಂಗ್ರಹಿಸಿದ್ದೇವೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಯಾವ ಸಮಯದಲ್ಲಿ ಕೊಲೆಯಾಗಿದೆ ಎಂಬುದನ್ನು ಈಗ ಹೇಳಲು ಆಗಲ್ಲ. ಹತ್ಯೆಯಾಗಿರುವ ಮಹದೇವಯ್ಯ ಭೂಮಿ ವ್ಯಾಜ್ಯಗಳನ್ನು ನಿರ್ವಹಿಸುತ್ತಿದ್ದರು. ಮಹದೇವಯ್ಯ ಭೂಮಿ ವ್ಯಾಜ್ಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು ಎಂದರು.



Join Whatsapp
Exit mobile version