Home ಟಾಪ್ ಸುದ್ದಿಗಳು ಅಯೋಧ್ಯೆಗೆ ರಾಜ್ಯದಿಂದ ಹೋಗುವ ಯಾರಿಗೂ ತೊಂದರೆ ಆಗಬಾರದು: ಪರಮೇಶ್ವರ್

ಅಯೋಧ್ಯೆಗೆ ರಾಜ್ಯದಿಂದ ಹೋಗುವ ಯಾರಿಗೂ ತೊಂದರೆ ಆಗಬಾರದು: ಪರಮೇಶ್ವರ್

ಬೆಂಗಳೂರು: ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ರಾಜ್ಯದಿಂದ ಹೋಗುವ ಜನರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಗೃಹಸಚಿವ ಜಿ. ಪರಮೇಶ್ವರ್ ಎಲ್ಲಾ ಎಸ್ ಪಿಗಳಿಗೂ ಸೂಚನೆ ನೀಡಿದ್ದಾರೆ.


ರಾಜ್ಯದಿಂದ ಜನವರಿ 22 ರಂದು ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಿಂದ ಸಾಕಷ್ಟು ಜನ ಹೋಗುತ್ತಾರೆ. ರಾಮ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಎಸ್ ಪಿಗಳಿಗೆ ಸೂಚನೆ ನೀಡಿದ್ದಾರೆ.

Join Whatsapp
Exit mobile version