ಕರ್ನಾಟಕದ ಪ್ರಗತಿ ತಡೆಯಲು ಯಾವ ರಾಜ್ಯಗಳಿಗೂ ಸಾಧ್ಯವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ಕರ್ನಾಟಕದ ಅಭಿವೃದ್ದಿಯನ್ನು ತಡೆಯಲು ಯಾವ ರಾಜ್ಯಗಳಿಗೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನಮ್ಮಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರು ಬರುತ್ತಿದ್ದಾರೆ , ಯಾರು ಎಷ್ಟೇ ಅಭಿಯಾನ ಮಾಡಿದರೂ, ಕರ್ನಾಟಕದ ಪ್ರಗತಿ ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

- Advertisement -

ನಮ್ಮ ರಾಜ್ಯವನ್ನು ತಮಿಳುನಾಡು, ತೆಲಂಗಾಣಕ್ಕೆ ಹೋಲಿಸಲು ಸಾಧ್ಯವಿಲ್ಲ, ಅವರೆಲ್ಲರೂ ಈಗಷ್ಟೆ ಅವರ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ನನ್ನ ರಾಜ್ಯದಲ್ಲಿ ಇರುವ ಒಳ್ಳೆಯದನ್ನ ತೋರಿಸಿ ಬಂಡವಾಳ ಹೂಡಿಕೆಗೆ ಕರೆಯಬೇಕೇ ಹೊರತು ಇನ್ನೊಂದು ರಾಜ್ಯವನ್ನು ತೆಗಳುವ ಮೂಲಕ ಅಲ್ಲ ಎಂದು ಪರೋಕ್ಷವಾಗಿ ತಮಿಳುನಾಡು, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ನಾನೆಂದೂ ತಮಿಳುನಾಡು, ತೆಲಂಗಾಣದವರನನ್ನು ಇಲ್ಲಿಗೆ ಬರುವಂತೆ ವಿನಂತಿಸಿಲ್ಲ, ಇದುವೇ ನಮ್ಮ ಸ್ಟ್ರೆಂಥ್ ಎಂದಿರುವ ಬೊಮ್ಮಾಯಿ, ನಮಗೆ ಅಂತರರಾಷ್ಟ್ರೀಯ ಜನರು ಹೂಡಿಕೆ ಮಾಡಲು‌ ಬರ್ತಿದ್ದಾರೆ.ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೂಡಿಕೆ ರಾಜ್ಯಕ್ಕೆ ಬರಲಿದೆ. ನಮಗೆ ಅನೇಕ ಪ್ರೊಪೋಸಲ್ ಬರುತ್ತಿದೆ, ಎಂದು ಹೇಳಿದ್ದಾರೆ.

Join Whatsapp
Exit mobile version